ರಾಮನಗರ: ಬಿಡದಿಯಲ್ಲಿರುವ ನಿತ್ಯಾನಂದ ಧ್ಯಾನಪೀಠದ ಸುತ್ತ ಶಿಷ್ಯಂದಿರು ಕಾವಲು ಹೆಚ್ಚಿಸಿದ್ದಾರೆ. ಸುತ್ತಲಿನ ಕಾಂಪೌಂಡ್ ಅನ್ನು ಐದರಿಂದ ಹತ್ತು ಅಡಿಗಳಿಗೆ ಎತ್ತರಿಸುವ ಕಾರ್ಯ ಸದ್ದಿಲ್ಲದೇ ನಡೆದಿದೆ. ಅಲ್ಲದೆ ಅಲ್ಲಿ ನಿತ್ಯಾನಂದನ ಪ್ರತಿಮೆ ಸ್ಥಾಪನೆ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೂ ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಆಶ್ರಮದಲ್ಲಿರುವ ನಿತ್ಯಾನಂದ ಶಿಷ್ರು ಗೇಟುಗಳಲ್ಲಿ ತಾವೇ ಕಾವಲಿಗೆ ನಿಂತಿದ್ದಾರೆ. ಅಹಮದಾಬಾದ್ ಆಶ್ರಮದಲ್ಲಿದ್ದ ಕೆಲ ಮಕ್ಕಳನ್ನು ಇಲ್ಲಿಗೆ ಕರೆತರಲಾಗುತ್ತಿದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.