ADVERTISEMENT

‘ಇಲ್ಲ ಇಲ್ಲ, ರೆಸಾರ್ಟ್‌ನಲ್ಲಿ ಗಲಾಟೆಯಾಗಿಲ್ಲ, ಸಿದ್ದರಾಮಯ್ಯಗೆ ಕಾರ್ ಕೊಟ್ಟಿಲ್ಲ’

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 6:50 IST
Last Updated 20 ಜನವರಿ 2019, 6:50 IST
   

ರಾಮನಗರ: ಬಿಡದಿಯ ಈಗಲ್ ಟನ್ ರೆಸಾರ್ಟಿನಲ್ಲಿ ‌ಶಾಸಕರ ನಡುವೆ ಯಾವುದೇ‌ ಗಲಾಟೆ ನಡೆದಿಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಆನಂದ ಸಿಂಗ್ ಮತ್ತು‌ ಗಣೇಶ್ ನಡುವೆ ಯಾವುದೇ ವೈಮನಸ್ಯ ಇಲ್ಲ. ಆನಂದ್ ಸದ್ಯ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ರೆಸಾರ್ಟಿನಿಂದ ಹೊರ ಹೋಗಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದರು.ಸಂಜೆ 4 ಗಂಟೆಗೆ ವೇಣುಗೋಪಾಲ್ ನೇತೃತ್ವದಲ್ಲಿ ಶಾಸಕರ ಸಭೆ ನಡೆಯಲಿದೆ. ಸಭೆಯ ನಂತರ ಶಾಸಕರು ಇಲ್ಲಿಂದ ತೆರಳಲಿದ್ದಾರೆ ಎಂದರು.

ಕಾರ್‌ ಉಡುಗೊರೆ‌ ನೀಡಿಲ್ಲ:ರಾಮನಗರ: ಕಾಂಗ್ರೆಸ್ ನ ಯಾವ ಶಾಸಕರೂ ಸಿದ್ದರಾಮಯ್ಯ ಅವರಿಗೆ ಕಾರ್ ಉಡುಗೊರೆ ನೀಡಿಲ್ಲ ಎಂದು ಡಿ.ಕೆ. ಶಿವಕುಮಾರ್ ಭಾನುವಾರ ಸ್ಪಷ್ಟನೆ ನೀಡಿದರು.

ADVERTISEMENT

ಗೆಳೆಯರಿಗೆ ಬಳಕೆಗಾಗಿ ಕಾರ್ ನೀಡುವುದು ಸಾಮಾನ್ಯ. ಇದಕ್ಕೆ ತಪ್ಪು ಅರ್ಥ ಕಲ್ಪಿಸಬೇಕಿಲ್ಲ ಎಂದರು.ಶಾಸಕ ಭೈರತಿ ಸುರೇಶ್ ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, ನಾನು ಸಿದ್ದರಾಮಯ್ಯ ಅವರಿಗೆ ಕಾರ್ ಉಡುಗೊರೆ ನೀಡಿಲ್ಲ. ಅದು ನನ್ನದೇ ಕಾರ್. ನನ್ನಲ್ಲಿಯೇ ಇದೆ. ಮನೆ ಹತ್ತಿರ ನಿಲ್ಲಿಸಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.