ADVERTISEMENT

ರಾಮನಗರ | ಒಕ್ಕಲಿಗ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2023, 4:53 IST
Last Updated 22 ಸೆಪ್ಟೆಂಬರ್ 2023, 4:53 IST
ಕುದೂರು ಹೊರವಲಯದಲ್ಲಿ ನಡೆದ ಸರ್ಕಾರಿ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮಲ್ಲೂರು ಲೋಕೇಶ್ ಮಾತನಾಡಿದರು.
ಕುದೂರು ಹೊರವಲಯದಲ್ಲಿ ನಡೆದ ಸರ್ಕಾರಿ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮಲ್ಲೂರು ಲೋಕೇಶ್ ಮಾತನಾಡಿದರು.   

ಕುದೂರು: ತಾಲ್ಲೂಕಿನ ಒಕ್ಕಲಿಗ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹುದ್ದೆಗೆ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಶಿಕ್ಷಕ ಮಲ್ಲೂರು ಲೋಕೇಶ್, ಕಾರ್ಯಾಧ್ಯಕ್ಷರಾಗಿ ನರಸಿಂಹಯ್ಯ ಆಯ್ಕೆಯಾದರು.

ತಾಲ್ಲೂಕಿನ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸಭೆ ಸೇರಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.

ಈ ಹಿಂದೆ ಮಾಗಡಿ ತಾಲ್ಲೂಕಿನ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿದ್ದ ಹೂಜಿಗಲ್ ನಾಗರಾಜು, ನೆಲಮಂಗಲ ತಾಲ್ಲೂಕಿಗೆ ವರ್ಗಾವಣೆಗೊಂಡ ಬಳಿಕ ಖಾಲಿಯಾಗಿದ್ದ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು.

ADVERTISEMENT

ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ವೇದಿಕೆ ಉಪಾಧ್ಯಕ್ಷ ನಾರಾಯಣ್, ಸಿ.ಎನ್.ಕೃಷ್ಣಪ್ಪ, ಪುಟ್ಟಸ್ವಾಮಿ, ಸಹ ಕಾರ್ಯದರ್ಶಿ ಬಸಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಜಿ ಗಂಗಾಧರ, ಶಿವಸ್ವಾಮಿ, ಟಿ.ಎ ಕೃಷ್ಣ, ವೆಂಕಟಾಚಲಮೂರ್ತಿ, ವೆಂಕಟೇಶ್, ವಿಜಯಲಕ್ಷ್ಮಿ, ಸುರೇಶ್, ಜಿ.ಎನ್ ಗೋವಿಂದರಾಜು, ಶ್ರೀನಿವಾಸ್, ಎಚ್‌.ಎಂ. ನಾಗರಾಜು, ನರಸಿಂಹಯ್ಯ, ಅಶ್ವಥ್, ದೇವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.