ರಾಮನಗರ: ಕಾವೇರಿ ನದಿ ದಾಟಿ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ವೇಳೆ ಹಗ್ಗ ತುಂಡಾಗಿದ್ದು, ಈ ಸಂದರ್ಭ ಒಂದಿಬ್ಬರು ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಕನಕಪುರ ತಾಲ್ಲೂಕಿನ ಸಂಗಮ ಬಳಿ ಗುರುವಾರ ಸಂಜೆ ಈ ಘಟನೆ ನಡೆದಿದೆ.
ಪ್ರತಿ ವರ್ಷ ಜಿಲ್ಲೆಯಿಂದ ಸಾವಿರಾರು ಮಂದಿ ಕಾಲ್ನಡಿಗೆ ಮೂಲಕ ಮಹದೇಶ್ವರನ ಬೆಟ್ಟಕ್ಕೆ ತೆರಳುತ್ತಾರೆ. ಸಂಗಮ ಬಳಿ ಕಾವೇರಿ ನದಿ ದಾಟಿದರೆ ಬೆಟ್ಟದ ಹಾದಿ ಹತ್ತಿರವಾಗುತ್ತದೆ. ಹೀಗಾಗಿ ಸಂಗಮ ಬಳಿ ಭಕ್ತರೆಲ್ಲ ಒಟ್ಟುಗೂಡಿ ನದಿ ದಾಟುತ್ತ ಸಾಗುತ್ತಾರೆ.
ಗುರುವಾರ ರಾತ್ರಿ ಕೂಡ ಹೀಗೆ ಭಕ್ತರು ನದಿ ದಾಟುವಾಗ ರಕ್ಷಣೆಗಾಗಿ ಹಿಡಿದಿದ್ದ ಹಗ್ಗ ತುಂಡಾಗಿದೆ. ಇದರಿಂದ ಹಲವರು ನದಿಗೆ ಬಿದ್ದಿದ್ದು, ಜೊತೆಯಲ್ಲಿ ಇದ್ದವರು ರಕ್ಷಣೆ ಮಾಡಿದ್ದಾರೆ. ಆದಾಗ್ಯೂ ಕೆಲವರು ಕೊಚ್ಚಿ ಹೋಗಿರುವ ಶಂಕೆ ಇದ್ದು,ಹನೂರುವಲಯ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ. ಘಟನೆಯಲ್ಲಿ ಅನೇಕರಿಗೆ ಗಾಯಗಳಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.