ADVERTISEMENT

ಕುಡಿಯುವ ನೀರು ಪೂರೈಕೆಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 11 ಮೇ 2019, 13:10 IST
Last Updated 11 ಮೇ 2019, 13:10 IST
ಮಾಗಡಿ ಜ್ಯೋತಿನಗರದಲ್ಲಿ ಜೆಡಿಎಸ್‌ ಮುಖಂಡ ಎಂ.ಎನ್‌.ಮಂಜುನಾಥ ಕೊಳವೆಬಾವಿ ಕೊರೆಸಲು ಚಾಲನೆ ನೀಡಿದರು
ಮಾಗಡಿ ಜ್ಯೋತಿನಗರದಲ್ಲಿ ಜೆಡಿಎಸ್‌ ಮುಖಂಡ ಎಂ.ಎನ್‌.ಮಂಜುನಾಥ ಕೊಳವೆಬಾವಿ ಕೊರೆಸಲು ಚಾಲನೆ ನೀಡಿದರು   

ಮಾಗಡಿ: ‘ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 13ನೇ ಹಣಕಾಸು ಯೋಜನೆಯಡಿ ಕೊಳವೆಬಾವಿ ಕೊರೆಸಿ ನೀರು ಸರಬರಾಜು ಮಾಡಲಾಗುವುದು’ ಎಂದು ಜೆಡಿಎಸ್‌ ಮುಖಂಡ ಎಂ.ಎನ್‌.ಮಂಜುನಾಥ ತಿಳಿಸಿದರು.

ಪಟ್ಟಣದ ಜ್ಯೋತಿನಗರದಲ್ಲಿ ಕೊಳವೆಬಾವಿ ಕೊರೆಯಲು ಚಾಲನೆ ನೀಡಿ ಅವರು ಮಾತನಾಡಿದರು. ‘ಬರ ಪರಿಹಾರ ಯೋಜನೆಯಡಿ ಕೊಳವೆಬಾವಿ ಕೊರೆಸಲು ಸರ್ಕಾರ ಅನುಮತಿ ನೀಡಿದೆ. ಮಂಚನಬೆಲೆ ಜಲಾಶಯದಿಂದಲೂ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ತಾಂತ್ರಿಕ ಸಮಸ್ಯೆಯಾದಾಗ ಕೊಳವೆಬಾವಿ ನೀರನ್ನು ಮನೆಗಳಿಗೆ ಪೂರೈಕೆ ಮಾಡಲಾಗುವುದು’ ಎಂದರು.

ವಾರ್ಡ್‌ನ ನಿವಾಸಿಗಳಾದ ರಾಜಣ್ಣ, ರಮೇಶ್, ಲವ, ಶ್ರೀಕಾಂತ್, ಚಂದ್ರಪ್ಪ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.