ADVERTISEMENT

ಕನಕಪುರ | ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ರಸ್ತೆ ಸೈಕಲ್‌ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 15:44 IST
Last Updated 12 ಆಗಸ್ಟ್ 2023, 15:44 IST
ಕನಕಪುರ ಸೈಕಲ್‌ ಸ್ಪರ್ಧೆಯಲ್ಲಿ ವಿಜೇತರಾಗಿ ಚಾಂಪಿಯನ್‌ಷಿಪ್‌ ಪಡೆದ ಕಲ್ಲಹಳ್ಳಿದೊಡ್ಡಿ ಮೂರ್ತಿ ಆರ್‌., ಅವರಿಗೆ ಸೈಕಲ್‌ ನೀಡಲಾಯಿತು
ಕನಕಪುರ ಸೈಕಲ್‌ ಸ್ಪರ್ಧೆಯಲ್ಲಿ ವಿಜೇತರಾಗಿ ಚಾಂಪಿಯನ್‌ಷಿಪ್‌ ಪಡೆದ ಕಲ್ಲಹಳ್ಳಿದೊಡ್ಡಿ ಮೂರ್ತಿ ಆರ್‌., ಅವರಿಗೆ ಸೈಕಲ್‌ ನೀಡಲಾಯಿತು   

ಕನಕಪುರ: ಲಯನ್ಸ್‌ ಮತ್ತು ಲಿಯೋ ಕ್ಲಬ್‌ನಿಂದ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಜನತೆಗಾಗಿ ರಸ್ತೆ ಸೈಕಲ್‌ ಸ್ಪರ್ಧೆಯನ್ನು ಶನಿವಾರ ನಡೆಸಲಾಯಿತು.

18 ವರ್ಷ ಒಳಪಟ್ಟವರು ಮತ್ತು ಮೇಲ್ಪಟ್ಟವರು, 14 ವರ್ಷ ಒಳಪಟ್ಟವರು ಹಾಗೂ ಮಹಿಳಾ ವಿಭಾಗದಲ್ಲಿ ಸ್ಪರ್ಧೆಯನ್ನು ನಡೆಸಲಾಯಿತು. ಯುವಕರನ್ನು ಪ್ರೋತ್ಸಾಹಿಸಲು 30 ವರ್ಷಗಳಿಂದ ಲಯನ್ಸ್‌ ಸಂಸ್ಥೆಯು ಈ ಸೈಕಲ್‌‌ ಸ್ಪರ್ಧೆಯನ್ನು ನಡೆಸುತ್ತಿದ್ದು, ತಾಲ್ಲೂಕಿನಲ್ಲಿ ನಡೆಯುವ ಪ್ರತಿಷ್ಠಿತ ಸ್ಪರ್ಧೆಯಾಗಿದೆ.

ಎಲ್ಲಾ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಎರಡು ಸಮಾಧಾನಕರ ಬಹುಮಾನ ನೀಡಲಾಯಿತು. 150ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.

ADVERTISEMENT

ಲಯನ್ಸ್‌ ಅಧ್ಯಕ್ಷ ಡಾ.ವಿಜಯಕುಮಾರ್‌, ಕಾರ್ಯದರ್ಶಿ ವೆಂಕಟೇಶ್‌, ಖಜಾಂಚಿ ಬಸವರಾಜು, ಲಿಯೋ ಸಲಹೆಗಾರ ಮರಸಪ್ಪ ರವಿ, ಅಧ್ಯಕ್ಷ ಸಂದೀಪ್‌, ಕಾರ್ಯದರ್ಶಿ ಪ್ರಜ್ವಲ್‌, ಖಜಾಂಚಿ ಯಶ್ವಂತ್‌, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನೀಡುವ ಸೈಕಲ್‌ ಪ್ರಯೋಜಕ ನಗರಸಭೆ ಮಾಜಿ ಅಧ್ಯಕ್ಷ ಕೆ.ಎನ್‌.ದಿಲೀಪ್‌, ಲಯನ್ಸ್‌ ಮತ್ತು ಲಿಯೋ ಸದಸ್ಯರು ಉಪಸ್ಥಿತರಿದ್ದರು.

ಆದಿತ್ಯಾಸ್‌ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಿಂದ ಗೆದ್ದವರಿಗೆ ಪಾರಿತೋಷಕ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.