ರಾಮನಗರ: ಇಲ್ಲಿನ ಬಸವನಪುರ ಗೇಟ್ ಬಳಿ ಗುರುವಾರ ಸಂಜೆ ರೈಲು ಡಿಕ್ಕಿಯಾಗಿ ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ದಿಲೀಪ್ (28) ಮೃತಪಟ್ಟರು.
ಮೃತ ದಿಲೀಪ್ ಮಾದನಾಯನಹಳ್ಳಿ ಠಾಣೆ ವ್ಯಾಪ್ತಿಯ ರೌಡಿಶೀಟರ್ ಎನ್ನಲಾಗಿದೆ. ಅವರು ತಮ್ಮ ಸ್ನೇಹಿತರೊಂದಿಗೆ ಎರಡು ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ ಪೊಲೀಸರು ವಾಹನ ತಪಾಸಣೆಗೆ ಅಡ್ಡಗಟ್ಟಿದ್ದರು. ಈ ವೇಳೆ ಯುವಕರು ಕಾರ್ ನಿಲ್ಲಿಸದೇ ಅಲ್ಲಿಂದ ಪರಾರಿ ಆಗಿದ್ದರು. ಹೈವೆ ಪೆಟ್ರೋಲಿಂಗ್ ವಾಹನ ಅವರನ್ನು ಬೆನ್ನು ಹತ್ತಿ ಕಾರ್ ಹಾಗೂ ಮೂವರನ್ನು ವಶಕ್ಕೆ ಪಡೆದಿತ್ತು. ಉಳಿದ ಇಬ್ಬರು ಅಲ್ಲಿಂದ ಪರಾಗಿ ಆಗಿದ್ದರು.
ಹೀಗೆ ಪರಾರಿ ಆಗಿದ್ದವರು ಮತ್ತೆ ಹೆದ್ದಾರಿಗೆ ವಾಪಸ್ ಆಗುವ ವೇಳೆ ಕುಡಿದ ಮತ್ತಿನಲ್ಲಿ ರೈಲು ಹಳಿ ದಾಟಲು ಮುಂದಾಗಿದ್ದು, ಈ ಸಂದರ್ಭ ರೈಲು ಡಿಕ್ಕಿಯಾಗಿ ದಿಲೀಪ್ ಮೃತಪಟ್ಟರು ಎಂದು ಪೊಲೀಸರು ಮಾಹಿತಿ ನೀಡಿದರು. ಆದರೆ ಪೊಲೀಸರು ಬೆನ್ನು ಹತ್ತಿದ್ದ ವೇಳೆಯೇ ದಿಲೀಪ್ ಪರಾರಿ ಆಗಲು ಯತ್ನಿಸಿ ರೈಲಿಗೆ ಸಿಲುಕಿ ಮೃತಪಟ್ಟರು ಎಂದೂ ಹೇಳಲಾಗುತ್ತಿದೆ.
ರಾಮನಗರ ಎಸ್ಪಿ ಸಂತೋಷ್ ಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.