ರಾಮನಗರ: ತಾವರೆಕೆರೆಯ ತೋಟದ ಮನೆಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ಎಂಬುವರನ್ನು ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಣದ ವಿಚಾರವಾಗಿ ಕೊಲೆ ನಡೆದಿರುವುದು ಪ್ರಾಥಮಿಕ ತನಿಖೆ ವೇಳೆ
ಬಯಲಾಗಿದೆ.
ತಾವರೆಕೆರೆಯ ವರಕೆರೆ ಬೀದಿ ನಿವಾಸಿ ಟಿ.ಎನ್. ಪ್ರದೀಪ್ ಕುಮಾರ್ (33), ಮಂಜುನಾಥ ನಗರ ನಿವಾಸಿ ಟಿ.ಸಿ. ಸತೀಶ್ (20) ಹಾಗೂ ಎಎಸ್ಬಿ ಲೇಔಟ್ ನಿವಾಸಿ ತೇಜಸ್ಕುಮಾರ್ (22) ಬಂಧಿತರು. ಇತರ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಸಾಲವೇ ಕಾರಣ: ಆರೋಪಿಗಳು ಹತ್ಯೆಗೀಡಾದ ವ್ಯಕ್ತಿ ಜೊತೆ ವ್ಯಾವಹಾರಿಕ ನಂಟು ಹೊಂದಿದ್ದು, ಅದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.