ADVERTISEMENT

ವೀರಾಪುರ–ಪಾಲನಹಳ್ಳಿ ನಡುವಿನ ಬೆಟ್ಟದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 12:45 IST
Last Updated 5 ಡಿಸೆಂಬರ್ 2019, 12:45 IST
ಮಾಗಡಿ ವೀರಾಪುರ–ಪಾಲನಹಳ್ಳಿ ನಡುವೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ.
ಮಾಗಡಿ ವೀರಾಪುರ–ಪಾಲನಹಳ್ಳಿ ನಡುವೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ.   

ಕುದೂರು (ಮಾಗಡಿ): ವೀರಾಪುರದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿ ನಿಸರ್ಗ ಸಂಪತ್ತನ್ನು ಉಳಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಪಾಲನ ಹಳ್ಳಿ ಮತ್ತು ವೀರಾಪುರದ ನಡುವೆ ಇರುವ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ. ಬೃಹತ್‌ ಬಂಡೆಯ ಮೇಲೆ ಇರುವ ಪ್ರಾಗೈತಿಹಾಸಿಕ ಕಲ್ಗೋರಿಗಳು ನಾಶವಾಗಿವೆ. ಅರಣ್ಯ ಪ್ರದೇಶ ನೆಲಮಂಗಲ ವಲಯಕ್ಕೆ ಸೇರಿದೆ, ನೈಸರ್ಗಿಕ ಸಂಪತ್ತನ್ನು ರಕ್ಷಿಸಬೇಕಾದ ಅರಣ್ಯ ಅಧಿಕಾರಿಗಳು ಅಕ್ರಮ ಗಣಿಗಾರಿಕೆಯವರ ಜತೆಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ವಿದ್ಯುತ್‌ ಬಳಸಿ, ಬೃಹತ್‌ ಬಂಡೆಗಳನ್ನು ಕತ್ತರಿಸಿ ಕಲ್ಲುಗಳನ್ನು ಹಗಲು ರಾತ್ರಿ ಎನ್ನದೆ ಸಾಗಿಸಲಾಗುತ್ತಿದೆ. ನಿಸರ್ಗ ಸಂಪತ್ತನ್ನು ಉಳಿಸಬೇಕಿದೆ ಎಂದು ಸುತ್ತಲಿನ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.