ADVERTISEMENT

ರಾಮನಗರ: ಬೀದಿನಾಯಿಗಳ ದಾಳಿ, ಮೂವರು ಮಕ್ಕಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 14:09 IST
Last Updated 10 ಆಗಸ್ಟ್ 2021, 14:09 IST
ಬೀದಿನಾಯಿ‌ಗಳು (ಸಾಂದರ್ಭಿಕ ಚಿತ್ರ)
ಬೀದಿನಾಯಿ‌ಗಳು (ಸಾಂದರ್ಭಿಕ ಚಿತ್ರ)   

ರಾಮನಗರ: ಚನ್ನಪಟ್ಟಣದ ಇಂದಿರಾ ಕಾಟೇಜ್ ಬಡಾವಣೆಯಲ್ಲಿ ಮಂಗಳವಾರ ಬೀದಿನಾಯಿ‌ಗಳ ದಾಳಿಯಿಂದ ಮೂವರು ಮಕ್ಕಳು ಗಾಯಗೊಂಡಿದ್ದಾರೆ.

ಮಧ್ಯಾಹ್ನ 3 ಗಂಟೆ‌ ವೇಳೆಗೆ‌‌ ಮನೆ ಮುಂದೆ ಕುಳಿತಿದ್ದ‌ ಮಕ್ಕಳ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿದೆ.

ತಸೀರ್ (5), ನಗೀನಾ (12) ಹಾಗೂ ಮತ್ತೊಬ್ಬ ಬಾಲಕನಿಗೆ ಗಾಯಗಳಾಗಿವೆ.

ಒಬ್ಬ ಬಾಲಕನ ತಲೆ ಹಾಗೂ‌ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಎಲ್ಲ ಮಕ್ಕಳಿಗೂ ಚನ್ನಪಟ್ಟಣ ತಾಲ್ಲೂಕು ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT