ಚನ್ನಪಟ್ಟಣ: ಅಗಸ್ತ್ಯ ಪ್ರತಿಷ್ಠಾನ ಮತ್ತು ಧ್ವನಿ ಫೌಂಡೇಶನ್ ವತಿಯಿಂದ ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಟ್ಯಾಬ್ ವಿತರಣೆ ಮಾಡಲಾಯಿತು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು ಅವರು, ವಿದ್ಯಾರ್ಥಿನಿಯರಾದ ಎಸ್. ಭೂಮಿಕಾ, ನಿಸರ್ಗ, ಪ್ರಿಯದರ್ಶಿನಿ, ಪ್ರಾರ್ಥನಾ, ನಂದಿತಾ, ಸರಸ್ವತಿ ಅವರಿಗೆ ಟ್ಯಾಬ್ ವಿತರಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಣ್ಣ, ಶಿಕ್ಷಣ ಸಂಯೋಜಕರಾದ ತಮ್ಮಣ್ಣ, ಕಂಬಯ್ಯ, ಮುತ್ತಯ್ಯ, ರಾಜಶೇಖರ್, ರವಿಕುಮಾರ್, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ವಿಜ್ಞಾನ ಶಿಕ್ಷಕ ಕೃಷ್ಣ ಮತ್ತು ಅಗಸ್ತ್ಯ ಪ್ರತಿಷ್ಠಾನದ ಪ್ರತಿನಿಧಿಗಳಾದ ಮಂಜುನಾಥ್, ಮನು, ಭರತ್ ಕುಮಾರ್, ವಿಶ್ವನಾಥ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.