ADVERTISEMENT

ಟಿಎಪಿಎಂಎಸ್‌ ಅಧ್ಯಕ್ಷರಾಗಿ ಚಕ್ರಬಾವಿ ರವೀಂದ್ರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 13:49 IST
Last Updated 18 ನವೆಂಬರ್ 2019, 13:49 IST
ಮಾಗಡಿ ಟಿಎಪಿಎಂಎಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚಕ್ರಬಾವಿ ರವೀಂದ್ರ ಅವರನ್ನು ಚಂದ್ರೇಗೌಡ ಅಭಿನಂದಿಸಿದರು. ಧನಂಜಯ ಇದ್ದರು
ಮಾಗಡಿ ಟಿಎಪಿಎಂಎಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚಕ್ರಬಾವಿ ರವೀಂದ್ರ ಅವರನ್ನು ಚಂದ್ರೇಗೌಡ ಅಭಿನಂದಿಸಿದರು. ಧನಂಜಯ ಇದ್ದರು   

ಮಾಗಡಿ: ಟಿಎಪಿಎಂಎಸ್‌ ಅಧ್ಯಕ್ಷರಾಗಿ ಚಕ್ರಬಾವಿ ರವೀಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಸನ್ನಕುಮಾರಿ ತಿಳಿಸಿದರು.

ಅಧ್ಯಕ್ಷರಾಗಿದ್ದ ಚನ್ನಪ್ಪ ಅವರ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ಚುನಾವಣೆ ನಡೆಯಿತು. ಚಕ್ರಬಾವಿ ರವೀಂದ್ರ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದರು.

ಜಿಲ್ಲಾಪಂಚಾಯಿತಿ ಸದಸ್ಯರಾದ ನಾಗರತ್ನ ಚಂದ್ರೇಗೌಡ, ಎಚ್‌.ಎನ್‌.ಅಶೋಕ್‌, ನಿರ್ದೇಶಕರಾದ ಹೊನ್ನಪ್ಪ, ತಮ್ಮಣ್ಣಗೌಡ, ಮುಖಂಡರಾದ ಅಗಲಕೋಟೆ ರಾಮಣ್ಣ ಈಡಿಗ, ಯೋಗಾನರಸಿಂಹಣ್ಣ, ಕೋರಮಂಗಲ ಶ್ರೀನಿವಾಸ್‌, ಚಂದೂರಾಯನಹಳ್ಳಿ ನಾರಾಯಣ್‌, ತೋಟದ ಮನೆಗಿರೀಶ್‌, ಕಂಚೇಗೌಡ, ಪುಟಾಣಿಕುಮಾರ್‌, ಸಿ.ಎನ್‌.ದೀಪಕ್‌, ಪ್ರಭಾರ ಕಾರ್ಯದರ್ಶಿ ನಾರಾಯಣ್‌ ಉಪಸ್ಥಿತರಿದ್ದು ಅಭಿನಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.