ಮಾಗಡಿ: ಪಟ್ಟಣದ ಹೊಂಬಾಳಮ್ಮನಪೇಟೆ ವಿನಾಯಕಸ್ವಾಮಿ ಕಾರ್ತಿಕ ದೀಪೋತ್ಸವ ಬುಧವಾರ ರಾತ್ರಿ ನಡೆಯಿತು. ಪುರಸಭೆ ಸದಸ್ಯ ಜಯರಾಮು ಚಾಲನೆ ನೀಡಿದರು.
ಪುರಸಭೆ ಸದಸ್ಯ ವೆಂಕಟರಾಮ್ ಹಾಗೂ ಭಕ್ತರು ದೀಪ ಬೆಳಗಿಸಿದರು. ವಿನಾಯಕಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಸಾಮೂಹಿಕ ಅನ್ನದಾನ ನಡೆಯಿತು.
ತಿಗಳಗೌಡ ಕುಲದ ಯಜಮಾನ್ ರಂಗಯ್ಯ, ಗೌಡ ರಂಗಪ್ಪ, ಖಾದ್ರಿ ನರಸಿಂಹಯ್ಯ ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.