ADVERTISEMENT

ಅಸಂಘಟಿತರ ನೆರವಿಗೆ ಮತ್ತೊಂದು ಪ್ಯಾಕೇಜ್

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಮೇ 2020, 11:16 IST
Last Updated 7 ಮೇ 2020, 11:16 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಶಿವಮೊಗ್ಗ:ನೋಂದಾಯಿಸದ, ತೆರೆ ಮರೆಯಲ್ಲೇ ದುಡಿಯುವ ಅಸಂಘಟಿತ ಕಾರ್ಮಿಕರಿಗೂ ಸರ್ಕಾರನೆರವಾಗಬೇಕು. ಹೆಚ್ಚುವರಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಆಯನೂರು ಮಂಜುನಾಥ್‌ ಒತ್ತಾಯಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಮಾರು 1,610ಕೋಟಿ ರು.ಪ್ಯಾಕೇಜ್‌ ಘೋಷಿಸುವ ಮೂಲಕ ಕಾರ್ಮಿಕರ,ರೈತರ ನೆರವಿಗೆ ನಿಂತಿದ್ದಾರೆ. ಅವರಿಗೆ ಕೃತಜ್ಞತೆಸಲ್ಲಿಸಬೇಕು. ಜತೆಗೆ,ಹಲವುಸಣ್ಣಪುಟ್ಟ ಬಡ ಕುಟುಂಬಗಳು, ಲೆಕ್ಕಕ್ಕೆ ಸಿಗದ ಅಸಂಘಟಿತ ಕಾರ್ಮಿಕರುಇದ್ದಾರೆ.ಅಂಥ ವರ್ಗಗಳನ್ನು ಗುರುತಿಸಬೇಕು.ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಶ್ರೀಮಂತರ ಮನೆಗಳಲ್ಲಿಕಸ, ಮುಸುರೆ ಕೆಲಸ ಮಾಡುವ ಹೆಣ್ಣು ಮಕ್ಕಳು, ಟೈಲರ್‌ಗಳು,ಹಮಾಲರು, ಚಿನ್ನ ಬೆಳ್ಳಿ ಕೆಲಸ ಮಾಡುವವರು, ನೋಂದಾಯಿಸದ ಕ್ಷೌರಿಕರು, ಕುಂಬಾರರು ನಿತ್ಯದದುಡಿಮೆ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದರು. ಈಗ ಕೆಲಸ ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ.
ಎಪಿಎಂಸಿಯಲ್ಲೂನೋಂದಾಯಿಸದ ಹಮಾಲರು, ತೂಕ ಮಾಡುವವರು, ದಿನಗೂಲಿ ಕೆಲಸ ಮಾಡುವವರು ಇದ್ದಾರೆ. ಅವರೆಲ್ಲರಿಗೂ ಆಯಾ ಎಪಿಎಂಸಿಗಳೇ ಹಣದ ನೆರವು ನೀಡುವಂತೆ ನಿರ್ದೇಶನ ನೀಡಬೇಕು. ಸಚಿವರು ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ವಲಸೆ ಕಾರ್ಮಿಕರುಈಗಾಗಲೇತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಸುಮಾರು 80 ಲಕ್ಷ ಜನರು ಮೂಲ ಸ್ಥಳಗಳಿಗೆ ಹಿಂದಿರುಗಿದ್ದಾರೆ. ಆದರೂ,ಸರ್ಕಾರನೀಡಿದಕಿಟ್‌ಗಳು ಅಷ್ಟೇ ಪ್ರಮಾಣದಲ್ಲಿ ಖರ್ಚಾಗುತ್ತಿವೆ.ಆಹಾರ ಪದಾರ್ಥಗಳ ಕಿಟ್‌ ದುರುಪಯೋಗವಾಗುತ್ತಿವೆ.ನಿಜವಾದ ಫಲಾನುಭವಿಗಳಿಗೆ ತಲುಪಲು ಕ್ರಮ ಕೈಗೊಳ್ಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮುಖಂಡರಾದ ರವಿ, ಸುಬ್ರಮಣ್ಯ, ಈಶ್ವರಪ್ಪಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.