ಶಿವಮೊಗ್ಗ:ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ.ವಿಜಯೇಂದ್ರ, ಸಂಸದೆ ಶೋಭಾ ಕರಂದ್ಲಾಜೆಅವರಿಂದಲೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರದಲ್ಲಿ ಶನಿವಾರ ಅವರು ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಮಾನಸ ಪುತ್ರರೆಂದು ಹೇಳಿಕೊಂಡು ಓಡಾಡುತ್ತಿರುವವರೂ ತಿರುಗಿಬಿದಿದ್ದಾರೆ.ಅವರ ಪಕ್ಷದ ಬಹುತೇಕ ಶಾಸಕರುತಮ್ಮ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲಎಂದು ಅಸಮಾಧಾನಗೊಂಡಿದ್ದಾರೆ. ಗುಪ್ತ ಸಭೆಗಳನ್ನುನಡೆಸುತ್ತಿದ್ದಾರೆ. ಅಸಮಾಧಾನ ಸ್ಫೋಟಗೊಳ್ಳಲಿದೆ. 6 ತಿಂಗಳಲ್ಲಿ ಕುರ್ಚಿ ತ್ಯಜಿಸಲಿದ್ದಾರೆ ಎಂದರು.
ನಾನು ಭವಿಷ್ಯ ಹೇಳುತ್ತಿಲ್ಲ.ಭವಿಷ್ಯ ನುಡಿಯಲುಕೋಡಿಮಠದ ಸ್ವಾಮಿಯಲ್ಲ. ಇದು ವಾಸ್ತವ. ಕೋಡಿಮಠದ ಸ್ವಾಮಿಗಳೇಯಡಿಯೂರಪ್ಪ ಅವರಜತೆ ಹೊಂದಾಣಿಕೆ ಮಾಡಿಕೊಂಡಂತೆ ಕಾಣುತ್ತದೆ ಎಂದು ಛೇಡಿಸಿದರು.
ವಿಶ್ವನಾಥ್ ಫಲ ಉಣ್ಣುತ್ತಿದ್ದಾರೆ:
ಎಚ್.ವಿಶ್ವನಾಥ್ಅವರಿಗೆವಿಧಾನ ಪರಿಷತ್ ಟಿಕೆಟ್ ತಪ್ಪಿರುವುದು ಒಳ್ಳೆಯ ಪಾಠ.ಮೈತ್ರಿ ಸರ್ಕಾರ ತೊರೆದು ಬಿಜೆಪಿಯಿಂದ ಸ್ಪರ್ಧಿಸಿ,ಸೋಲು ಕಂಡಿದ್ದವಿಶ್ವನಾಥ್ ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯನಾಗಲು ಹೊರಟಿದ್ದಾರೆ. ದ್ರೋಹದಫಲ ಪರೋಕ್ಷವಾಗಿ ಉಣ್ಣುತ್ತಿದ್ದಾರೆ ಎಂದು ಕುಟುಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.