ADVERTISEMENT

ಶಿವಮೊಗ್ಗ: 21 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 4:18 IST
Last Updated 5 ಸೆಪ್ಟೆಂಬರ್ 2021, 4:18 IST

ಶಿವಮೊಗ್ಗ: 2020-21ನೇ ಸಾಲಿನಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 7 ಕಿರಿಯ ಪ್ರಾಥಮಿಕ ಶಾಲೆ, 7 ಹಿರಿಯ ಪ್ರಾಥಮಿಕ ಹಾಗೂ 7‍ಪ್ರೌಢಶಾಲೆ ಶಿಕ್ಷಕರು ಸೇರಿ ಒಟ್ಟು 21 ಶಿಕ್ಷಕರು ಭಾಜನರಾಗಿದ್ದಾರೆ.

ಕಿರಿಯ ಪ್ರಾಥಮಿಕ ಶಾಲೆ ವಿಭಾಗ:ಶಿವಮೊಗ್ಗದ ಅನುಪಿನಕಟ್ಟೆ ಶಾಲೆ ಶಿಕ್ಷಕಿ ಎಚ್‌.ಇ. ಮಾಲತಿ, ಭದ್ರಾವತಿ ತಾಲ್ಲೂಕಿನ ಕಲ್ಲಿಹಾಳ್‌ ಶಾಲೆ ಶಿಕ್ಷಕಿ ಮಾರ್ಗರೇಟ್‌ ಸುಶೀಲ, ಶಿಕಾರಿಪುರತಾಲ್ಲೂಕಿನ ಚಿಕ್ಕಮಾಗಡಿ ತಾಂಡಾ ಶಾಲೆಯ ಶಿಕ್ಷಕ ಕುಮಾರನಾಯ್ಕ, ಸೊರಬ ತಾಲ್ಲೂಕಿನ ತುಡಿನೀರು ಶಾಲೆ ಶಿಕ್ಷಕ ಶಂಕರಪ್ಪ, ತೀರ್ಥಹಳ್ಳಿತಾಲ್ಲೂಕಿನ ಕಲ್ಗುಡ್ಡ ಶಾಲೆ ಶಿಕ್ಷಕಿ ಪೌಜಿಯಾ ಸರಾವತ್‌, ಹೊಸನಗರತಾಲ್ಲೂಕಿನ ಪುರಪ್ಪೆಮನೆ ಶಾಲೆಯ ಶಿಕ್ಷಕ ಪ್ರಸನ್ನಕುಮಾರ್, ಸಾಗರತಾಲ್ಲೂಕಿನ ಹಕ್ರೆ ಶಾಲೆ ಶಿಕ್ಷಕ ಎಂ.ಪಿ. ಕೃಷ್ಣಮೂರ್ತಿ ಆಯ್ಕೆ
ಆಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲೆ ವಿಭಾಗ:ಶಿವಮೊಗ್ಗದ ಆಲದಹಳ್ಳಿ ಶಾಲೆ ಶಿಕ್ಷಕ ಎಚ್‌.ಬಿ. ಮಲ್ಲಪ್ಪ, ಭದ್ರಾವತಿತಾಲ್ಲೂಕಿನ ಹುಣಸೇಕಟ್ಟೆ ಶಾಲೆ ಶಿಕ್ಷಕಿ ಅನಿತಾಮೇರಿ, ಶಿಕಾರಿಪುರ ತಾಲ್ಲೂಕಿನ ಮೂಡಸಿದ್ದಾ‍ಪುರ ಶಾಲೆಯ ಶಿಕ್ಷಕ ಬಸವಣ್ಣಪ್ಪ, ಸೊರಬತಾಲ್ಲೂಕಿನ ಗುಡವಿ ಶಾಲೆ ಶಿಕ್ಷಕ ರೆಜಿನಾಡಯಾಸ್‌, ತೀರ್ಥಹಳ್ಳಿತಾಲ್ಲೂಕಿನ ವಟಗಾರು ಶಾಲೆ ಶಿಕ್ಷಕಿ ವಿ.ಯಶೋಧ, ಹೊಸನಗರತಾಲ್ಲೂಕಿನ ಹುಂಚ ಅಂಚೆ ಶಾಲೆ ಶಿಕ್ಷಕ ಕೆ.ಬಿ. ಅವಿನಾಶ್‌, ಸಾಗರತಾಲ್ಲೂಕಿನ ಈಳಿ ಶಾಲೆ ಶಿಕ್ಷಕಿ ಸೀತಾಬಾಯಿ ಭಟ್‌ ಅವರು ಆಯ್ಕೆಯಾಗಿದ್ದಾರೆ.

ADVERTISEMENT

ಪ್ರೌಢಶಾಲಾ ವಿಭಾಗ:ಶಿವಮೊಗ್ಗದ ಪಿಳ್ಳೆಂಗೇರಿ ಶಾಲೆ ಶಿಕ್ಷಕಿ ಸರೋಜಮ್ಮ, ಭದ್ರಾವತಿತಾಲ್ಲೂಕಿನ ಹೊಸಸಿದ್ದಪುರ ಶಾಲೆಯ ಶಿಕ್ಷಕ ಆರ್.ಬಸವರಾಜ್‌, ಶಿಕಾರಿಪುರತಾಲ್ಲೂಕಿನ ಕಲ್ಮನೆ ಶಾಲೆ ಶಿಕ್ಷಕ ಕರಿಬಸಪ್ಪ, ಸೊರಬ ಪ್ರೌಢಶಾಲೆ ಶಿಕ್ಷಕ ಎಂ.ವಿರೂಪಾಕ್ಷ‍ಪ್ಪ, ತೀರ್ಥಹಳ್ಳಿತಾಲ್ಲೂಕಿನ ಕಮ್ಮರಡಿ ಶಾಲೆಯ ಎನ್‌.ಟಿ. ಸುರೇಶ್‌, ಹೊಸನಗರತಾಲ್ಲೂಕಿನ ಭೀಮನಕೆರೆ ಮಸಗಲ್ಲಿ ಶಾಲೆ ಶಿಕ್ಷಕ ಮಂಜಪ್ಪ ಲಮಾಣಿ, ಸಾಗರತಾಲ್ಲೂಕಿನ ಪ್ರೌಢಶಾಲೆ ಶಿಕ್ಷಕ ದತ್ತಾತ್ರೇಯ ರಾಮಹೆಗಡೆ ಆಯ್ಕೆಯಾಗಿದ್ದಾರೆ.

10 ಮಂದಿ ಶಿಕ್ಷಕರಿಗೆ ವಿಶೇಷ ಪ್ರಶಸ್ತಿ:ಕಿರಿಯ ಪ್ರಾಥಮಿಕ ವಿಭಾಗದಿಂದ ಶಿವಮೊಗ್ಗ ಹಾಡೋನಹಳ್ಳಿ ಶಾಲೆ ಶಿಕ್ಷಕಿ ರಂಗಮ್ಮ ಹಾಗೂ ಶಿವಮೊಗ್ಗದ ಕೇಂದ್ರ ಕಾರಾಗೃಹ ಶಿಕ್ಷಕ ಗೋಪಾಲಕೃಷ್ಣ, ಹಿರಿಯ ಪ್ರಾಥಮಿಕ ವಿಭಾಗದಿಂದ ಭದ್ರಾವತಿ ಕಲ್ಲಳ್ಳಿ ಶಾಲೆ ಶಿಕ್ಷಕ ವಿರುಪಾಕ್ಷಯ್ಯ ಹಿರೇಮಠ, ಶಿಕಾರಿಪುರ ತಿಮಲಾಪುರ ಶಾಲೆ ಶಿಕ್ಷಕ ನಾಗರಾಜಾಚಾರ್‌, ಶಿವಮೊಗ್ಗ ಲಷ್ಕರ್‌ ಮೊಹಲ್ಲ ಶಾಲೆ ಶಿಕ್ಷಕಿ ಎಂ. ಸಫೂರ್‌ ಉನ್ನೀಸಾ ಹಾಗೂ ಹೊಸಮನೆ ಶಾಲೆ ಶಿಕ್ಷಕ ಎನ್‌.ಟಿ. ರವಿಕುಮಾರ್‌,ಸೊಬರದ ಚಿಕ್ಕಮಾಕೊಪ್ಪ ಶಾಲೆ ಶಿಕ್ಷಕ ದಿವಾಕರ್‌ ಎನ್‌. ನಾಯರ್, ಶಿಕಾರಿಪುರದ ಬೇಗೂರು ಶಾಲೆ ಶಿಕ್ಷಕ ಜಿ.ಬಿ. ಗೀತಾ, ಪ್ರೌಢಶಾಲಾ ವಿಭಾಗದಿಂದ ಸಾಗರದ ಆನಂದಪುರ ಕೆಪಿಎಸ್‌ ಶಾಲೆ ಶಿಕ್ಷಕಿ ಶಾಂತಕುಮಾರಿ, ಶಿವಮೊಗ್ಗ ಸೂಗೂರು ಶಾಲೆಯ ಅಶೋಕ್‌ ವಾಲಿಕಾರ್ ಅವರು ವಿಶೇಷ ಪುರಸ್ಕೃತ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.