ADVERTISEMENT

ಎಸ್‌ಪಿ ವಿರುದ್ಧ ನಿಂದನೆ:ಶಿಕಾರಿಪುರದಲ್ಲಿ ವಿಚಾರಣೆ ಎದುರಿಸಿದ ಶಾಸಕ ಬಿ.ಪಿ.ಹರೀಶ್

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 5:43 IST
Last Updated 23 ಸೆಪ್ಟೆಂಬರ್ 2025, 5:43 IST
ಬಿ.ಪಿ.ಹರೀಶ್
ಬಿ.ಪಿ.ಹರೀಶ್   

ಶಿಕಾರಿಪುರ: ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು ನಿಂದಿಸಿದ ಪ್ರಕರಣದಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ್ ಅವರು ಸೋಮವಾರ ಪಟ್ಟಣದ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದರು.  

ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ಕೇಶವ್ ಅವರು ವಿಚಾರಣೆಗೆ ಹಾಜರಾಗುವಂತೆ ಬಿ.ಪಿ.ಹರೀಶ್‌ ಅವರಿಗೆ ನೋಟಿಸ್ ನೀಡಿದ್ದರು.

ಶಾಸಕ ಬಿ.ಪಿ.ಹರೀಶ್ ಪಟ್ಟಣ ಠಾಣೆಗೆ ಬೆಳಿಗ್ಗೆ 11.30ಕ್ಕೆ ಆಗಮಿಸಿದರು. ಡಿವೈಎಸ್‌ಪಿ ಕೇಶವ್‌ ಅವರು ಸತತ ಎರಡು ಗಂಟೆ ವಿಚಾರಣೆ ನಡೆಸಿದರು. 

ADVERTISEMENT

ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಜಿಲ್ಲಾ ವರಿಷ್ಠಾಧಿಕಾರಿ ಕುರಿತು ವೈಯಕ್ತಿಕ ಟೀಕೆ ನನ್ನ ಉದ್ದೇಶವಲ್ಲ. ವ್ಯವಸ್ಥೆಯಲ್ಲಿ ಅತಿ ಓಲೈಕೆ ಸರಿಯಲ್ಲ. ಯಾರಿಗೆ ಎಷ್ಟು ಮಾನ್ಯತೆ ನೀಡಬೇಕೋ ಅಷ್ಟು ನೀಡಬೇಕು. ತನ್ಮೂಲಕ ಜನರಿಗೆ ವ್ಯವಸ್ಥೆ ಮೇಲೆ ಗೌರವ ತರುವಂತ ನಡೆದುಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಈ ನೆಲದ ಕಾನೂನಿನ ಮೇಲೆ ಗೌರವ ಇದೆ. ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.