ADVERTISEMENT

ಶಿವಮೊಗ್ಗ: ಗೋವುಗಳ ಕಳವು, ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 6:51 IST
Last Updated 1 ನವೆಂಬರ್ 2021, 6:51 IST
ಸಾಗರ ನಗರ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಗೋವುಗಳ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಶನಿವಾರ ಬಂಧಿಸಿದ್ದಾರೆ
ಸಾಗರ ನಗರ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಗೋವುಗಳ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಶನಿವಾರ ಬಂಧಿಸಿದ್ದಾರೆ   

ಸಾಗರ: ನಗರ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ಕು ಗೋವುಗಳನ್ನು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಶನಿವಾರ ಬಂಧಿಸಲಾಗಿದೆ.

ಶಿವಮೊಗ್ಗ ಟಿಪ್ಪು ನಗರದ ಅಮಾನುಲ್ಲಾ, ಸೈಯದ್ ದಸ್ತಗಿರ್, ತುಂಗಾ ನಗರದ ಸಿಕಂದರ್, ಹಾರ್ನಳ್ಳಿಯ ಮಹ್ಮದ್, ಮಂಗಳೂರಿನ ಫೈಜಲ್ ಬಂಧಿತರು.

ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ನಡೆದ ಗೋವುಗಳ ಕಳ್ಳತನ ಪ್ರಕರಣದಲ್ಲಿ ಈ ಆರೋಪಿಗಳು ಭಾಗಿಯಾಗಿದ್ದರು ಎನ್ನಲಾಗಿದೆ.

ADVERTISEMENT

ಡಿವೈಎಸ್‌ಪಿ ವಿನಾಯಕ ಎನ್.ಶೆಟಗೇರ್, ನಗರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಅಶೋಕ್ ಕುಮಾರ್, ಗ್ರಾಮಾಂತರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಗಿರೀಶ್, ಕಾರ್ಗಲ್ ಠಾಣೆ ಸಬ್ ಇನ್‌ಸ್ಪೆಕ್ಟರ್ ತಿರುಮಲೇಶ್, ಸಿಬ್ಬಂದಿ ಮಹ್ಮದ್ ಅಲಿ, ಸಂತೋಷ್ ನಾಯ್ಕ್, ಅಶೋಕ್, ತಾರಾನಾಥ್, ರಘು, ಶ್ರೀಧರ್, ಮಲ್ಲೇಶ್ಹಾಗೂ ಸಿಬ್ಬಂದಿ ಆರೋಪಿಗಳಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇಲ್ಲಿನ ಮಾರಿಕಾಂಬಾ ದೇವಸ್ಥಾನದ ತವರುಮನೆ ಎದುರು ಈಚೆಗೆ ವಾಹನವೊಂದರ ಮೂಲಕ ಗೋವುಗಳ ಕಳವು ಮಾಡಿದ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿಸೆರೆಯಾಗಿತ್ತು.ಈ ವಿಡಿಯೊ ಎಲ್ಲೆಡೆ ವೈರಲ್ ಆಗಿತ್ತು. ಇದರಿಂದ ಕಳ್ಳತನ ಮಾಡಿದವರ ಕುರಿತು ಮಹತ್ವದ ಸುಳಿವು ದೊರಕಿದ್ದು, ಶೀಘ್ರ ಅವರನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.