ಶಿವಮೊಗ್ಗ: ಸಮೀಪದ ಬಿದರೆಯ ಸಾಯಿಬಾಬ ಮಂದಿರದ ಹುಂಡಿ ಹೊಡೆದು ಹಣ ದೋಚಿದ್ದ ಆರೋಪಿಗಳನ್ನು 10 ದಿನಗಳಲ್ಲೇ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡದ ಭಂಟ್ವಾಳದ ಇಸ್ಮಾಯಿಲ್ (49), ಮಹಮದ್ ಗೌಸ್ (34), ಉಡುಪಿಯ ಪ್ರೇಮನಾಥ್ (18) ಮೂಡಬಿದರೆ ತೌಸಿಫ್ ಆಹಮದ್ (30) ಹಾಗೂ ಕಡೂರಿನ ತಿಮ್ಮಯ್ಯ (58) ಬಂಧಿತ ಆರೋಪಿಗಳು.
ಆರೋಪಿಗಳಿಂದ 24,500 ನಗದು, ಒಂದು ಪಿಸ್ತೂಲ್, ಕಾರು ಹಾಗೂ ಕಬ್ಬಿಣದ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ.
ನವೆಂಬರ್ 25ರಂದು ಬೆಳಿಗಿನ ಜಾವ ದೇವಸ್ಥಾನಕ್ಕೆ ನುಗ್ಗಿದ್ದ ಆರೋಪಿಗಳು ಹುಂಡಿ ಹೊಡೆದು ಸುಮಾರು ₨ 50 ಸಾವಿರ ನಗದು ದೋಚಿದ್ದರು. ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಉಮೇಶ ಈಶ್ವರ ನಾಯ್ಕ, ಸಿಪಿಐಲೋಕೇಶ್, ಪಿಎಸ್ಐ ಮಂಜು ಕುಪ್ಪಲೂರುನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಶುಕ್ರವಾರ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.