ಭದ್ರಾವತಿ: ಸಮೀಪದ ಕಾಗದನಗರಆನೆಕೊಪ್ಪದ ಅಡಿಕೆ ತೋಟದಲ್ಲಿ ಅಡಿಕೆ ಗೊನೆ ಕೀಳುತ್ತಿದ್ದಾಗ ಕಡಜ (ಕಣಜ) ಹುಳುಗಳು ಕಚ್ಚಿ ತೋಟದ ಮಾಲೀಕ ಹಾಗೂ ಕಾರ್ಮಿಕ ಶನಿವಾರ ಮೃತಪಟ್ಟಿದ್ದಾರೆ.
ತೋಟದ ಮಾಲೀಕ ಸಿ.ಎನ್.ನಂಜಪ್ಪ (48) ಹಾಗೂ ಕಾರ್ಮಿಕ ಸಿದ್ಲಿಪುರದ ಮಲ್ಲಿಕಾರ್ಜುನ (52) ಮೃತಪಟ್ಟವರು.
ಶುಕ್ರವಾರ ಸಂಜೆ ಅಡಿಕೆ ತೋಟದಲ್ಲಿ ಮಲ್ಲಿಕಾರ್ಜುನ ಅವರು ಅಡಿಕೆ ಗೊನೆ ಕೀಳುತ್ತಿದ್ದಾಗ ಕಡಜದ ಗೂಡಿಗೆ ಆಕಸ್ಮಿಕವಾಗಿ ಹಾನಿ ಮಾಡಿದ್ದರಿಂದ ಒಮ್ಮೆಲೇ ಕಡಜಗಳು ಗುಂಪಾಗಿ ದಾಳಿ ನಡೆಸಿದ್ದವು. ಅವರು ಕೆಳಗೆ ಬಿದ್ದರು. ಸಮೀಪದಲ್ಲಿದ್ದ ತೋಟದಮಾಲೀಕ ನಂಜಪ್ಪ ಅವರ ಮೇಲೂ ಕಡಜಗಳು ದಾಳಿ ನಡೆಸಿದವು.ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.