ಶಿವಮೊಗ್ಗ: ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ ಗ್ರಾಮಸ್ಥರೊಬ್ಬರ ಬಳಿ ಲಂಚ ಪಡೆಯುತ್ತಿದ್ದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಿಬ್ಬಂದಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದಿದ್ದಾರೆ.
ಕಚೇರಿಯ ಕಡತ ನಿರ್ವಾಹಕಿ ಎಂ.ಎಸ್.ಸುನೀತಾ ಎಸಿಬಿ ಬಲೆಗೆ ಬಿದ್ದವರು.
ಶಿಕಾರಿಪುರ ತಾಲ್ಲೂಕು ಬಗಣಕಟ್ಟೆಯ ರೈತ ಮಲ್ಲೇಶಪ್ಪ ತಮ್ಮ ಪತ್ನಿ ಎಂ.ಸಾವಿತ್ರಮ್ಮ ಅವರ ಹೆಸರಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ₹ 1ಲಕ್ಷ ಸಾಲಕ್ಕಾಗಿ 2018ರಲ್ಲಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು. ಸಾವಿತ್ರಮ್ಮ ಅವರ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಆಯ್ಕೆಯಾಗದ್ದು ಅದನ್ನು ಅನುಮೋದನೆಗೆ ಕಳುಹಿಸಲು ಸುನೀತಾ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಎಸಿಬಿ ಡಿವೈಎಸ್ಪಿ ಲೋಕೇಶ್ ಮತ್ತವರ ತಂಡ ದಾಳಿ ನಡೆಸಿ, ವಶಕ್ಕೆ ಪಡೆದಿದೆ. ಈ ಪ್ರಕರಣದ ಪರಿಣಾಮ ನಿಗಮದಲ್ಲಿ ಬಾಕಿ ಇದ್ದ ಎಲ್ಲ 40 ಅರ್ಜಿಗಳನ್ನೂ ತ್ವರಿತವಾಗಿ ವಿಲೇವಾರಿ ಮಾಡುವಂತೆ ಎಸಿಬಿ ಪೊಲೀಸರು ತಾಕೀತು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.