ADVERTISEMENT

ಶಿಕಾರಿಪುರ | ಶವ ಪರೀಕ್ಷೆ ವರದಿ ನೀಡಲು ಲಂಚ; ವೈದ್ಯನ ಬಂಧನ

​ಪ್ರಜಾವಾಣಿ ವಾರ್ತೆ
Published 20 ಮೇ 2025, 14:19 IST
Last Updated 20 ಮೇ 2025, 14:19 IST
ವೈದ್ಯ ಗೋಪಾಲ್ ಜಿ.ಹರಿಗಿ
ವೈದ್ಯ ಗೋಪಾಲ್ ಜಿ.ಹರಿಗಿ   

ಶಿಕಾರಿಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯರೊಬ್ಬರು ಶವ ಪರೀಕ್ಷೆ ವರದಿ ನೀಡುವುದಕ್ಕಾಗಿ ಮಂಗಳವಾರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವೈದ್ಯರನ್ನು ಬಂಧಿಸಿದ್ದಾರೆ.

ವೈದ್ಯ ಗೋಪಾಲ್ ಜಿ.ಹರಿಗಿ ಬಂಧಿತ ವೈದ್ಯ. ಸತೀಶ್ ಮಂಚಿ ಎಂಬುವರ ಶವ ಪರೀಕ್ಷೆ ವರದಿ ನೀಡುವುದಕ್ಕೆ ತಾಲ್ಲೂಕಿನ ಕಪ್ಪನಹಳ್ಳಿ ಗ್ರಾಮದ ಎನ್.ವೈ.ಸುನೀಲ್ ಅರ್ಜಿ ಸಲ್ಲಿಸಿದ್ದರು. ವರದಿ ನೀಡುವುದಕ್ಕೆ ವೈದ್ಯರು ₹ 20,000 ಲಂಚದ ಬೇಡಿಕೆ ಇಟ್ಟಿದ್ದರು. ಹಣ ನೀಡುವಾಗ ವೈದ್ಯರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ಶಿವಮೊಗ್ಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಲೋಕಾಯುಕ್ತ ಇನ್‌ಸ್ಪೆಕ್ಟರ್ ಗುರುರಾಜ್, ಯೋಗೀಶ್, ಮಂಜುನಾಥ್, ಸುರೇಂದ್ರ, ಚನ್ನೇಶ್, ದೇವರಾಜ್ ಇತರೆ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.