ADVERTISEMENT

ಶಿವಮೊಗ್ಗ: ನಕಲಿ ದಾಖಲೆ ನೀಡಿ ವಂಚನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 3:46 IST
Last Updated 31 ಅಕ್ಟೋಬರ್ 2021, 3:46 IST

ಶಿವಮೊಗ್ಗ: ಸವಳಂಗ ರಸ್ತೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಶಾಖೆಗೆ ನಕಲಿ ದಾಖಲೆಗಳನ್ನು ನೀಡಿ ವಾಹನ ಸಾಲ ಪಡೆದು,ವಂಚಿಸಲಾಗಿದೆ.

ವಿನೋಬನಗರದ ಬಿ.ಕೆ. ಪ್ರಸನ್ನ ಹೋಂಡಾ ಕಾರು ಖರೀದಿಸಿದ ನಕಲಿ ದಾಖಲೆಗಳನ್ನು ನೀಡಿ, ಜುಲೈನಲ್ಲಿ ₹ 7.50 ಲಕ್ಷ ಸಾಲ ಪಡೆದಿದ್ದರು. ಒಪ್ಪಂದದಂತೆ ಸೆಪ್ಟೆಂಬರ್‌ನಲ್ಲಿ ಮೊದಲ ಕಂತು ಪಾವತಿಸಬೇಕಿತ್ತು. ಕಂತು ಪಾವತಿಯಾಗದ ಕಾರಣ ಈಚೆಗೆ ಬ್ಯಾಂಕ್‌ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ನಕಲಿ ದಾಖಲೆಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ.

ಆರೋಪಿ ವಿರುದ್ಧ ಬ್ಯಾಂಕ್‌ ವ್ಯವಸ್ಥಾಪಕರು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.