ಶಿವಮೊಗ್ಗ: ದಂತ ವೈದ್ಯರ ಮೇಲೆ ಸುಳ್ಳು ಆರೋಪ ಮಾಡಿದ್ದ ವ್ಯಕ್ತಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ₹ 5 ಸಾವಿರ ದಂಡ ವಿಧಿಸಿದೆ.
ಎರಡು ವರ್ಷಗಳ ಹಿಂದೆ ಮಲ್ಲಿಕಾರ್ಜುನ ಪಾಟೀಲ್ ಎಂಬವರು ದಂತವೈದ್ಯ ಬಿ.ಪರಮೇಶ್ವರಪ್ಪ ಎಂಬುವರು ದಂತ ಚಿಕಿತ್ಸೆ ವೇಳೆ ಎರಡು ಹಲ್ಲುಗಳನ್ನು ಕಿತ್ತ ಪರಿಣಾಮ ತೀವ್ರ ರಕ್ತಸ್ರಾವವಾಗಿ ಬೇರೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿ, ಹಲ್ಲು ಕಿತ್ತಿದ್ದರಿಂದ ಈಗ ತಲೆನೋವು ಬರುತ್ತಿದೆ ಎಂದು ಆರೋಪಿಸಿ ದಂತವೈದ್ಯರ ಮೇಲೆ ಆಪಾದನೆ ಮಾಡಿದ್ದರು.
ದಾಖಲೆ ಪರಿಶೀಲಿಸಿದಾಗ ಗ್ರಾಹಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಾಬೀತಾದ ನಂತರ ಆರೋಪ ಮಾಡಿದ ವ್ಯಕ್ತಿ ವೈದ್ಯನಿಗೆ ದಂಡ ರೂಪದಲ್ಲಿ ₹ 5 ಸಾವಿರ ಪಾವತಿಸಲು ವೇದಿಕೆ ಅಧ್ಯಕ್ಷೆ ಸಿ.ಎಂ.ಚಂಚಲ, ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ ಮತ್ತು ಪಿ.ವಿ.ಲಿಂಗರಾಜು ಆದೇಶ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.