ಶಿವಮೊಗ್ಗ: ಶಾರ್ಟ್ ಸರ್ಕಿಟ್ನಿಂದ ಶುಕ್ರವಾರ ಬೆಳಗಿನ ಜಾವ ಕೆಎಸ್ಆರ್ಟಿಸಿ ಡಿಪೊ ಎದುರಿನ ತಿನಿಸು ಪದಾರ್ಥಗಳ ಮಳಿಗೆ ಸುಟ್ಟು ಹೋಗಿದೆ. ಅಪಾರ ನಷ್ವವಾಗಿದೆ.
ರಫೀಕ್ ಅವರಿಗೆ ಸೇರಿದ ದುರ್ವೇಶ್ ಅಸೋಸಿಯೇಷನ್ನಲ್ಲಿ ಈ ಅವಘಡ ನಡೆದಿದೆ. ಬಿಸ್ಕೆಟ್, ಚಾಕೊಲೇಟ್ ಮತ್ತಿತರ ತಿನಿಸು ವಸ್ತುಗಳು ಸುಟ್ಟು ಕರಕಲಾಗಿವೆ.
ರಫೀಕ್ ಒಂದೂವರೆ ವರ್ಷದಿಂದ ವಿವಿಧ ಕಂಪನಿಗಳ ತಂಪು ಪಾನೀಯಗಳು ಸೇರಿದಂತೆ ತಿನಿಸುಗಳ ಸಗಟು ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ಅಂಗಡಿಯ ಇರುವ ಮಹಡಿಯ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿತ್ತು. ಈ ಕಾರ್ಯಕ್ಕೆ ಬಂದವರು ಕಟ್ಟಡ ಮೇಲೆ ಮಲಗಿದ್ದರು. ಬೆಂಕಿ ಕಂಡ ತಕ್ಷಣ ಬಂದು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಮೆಸ್ಕಾಂ, ದೊಡ್ಡಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.