ಶಿವಮೊಗ್ಗ: ಇಲ್ಲಿನ ಗಾಂಧಿ ಬಜಾರ್ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬಳಿಯ ಮಾತೃಶ್ರೀ ನಾವೆಲ್ಟಿಸ್ ಕಟ್ಟಡ ಶನಿವಾರ ತಡರಾತ್ರಿ ಅಗ್ನಿಗೆ ಆಹುತಿಯಾಗಿದೆ.
ಅಂಗಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಸ್ಮೆಟಿಕ್ ಸಾಮಗ್ರಿಗಳು ಇದ್ದವು ಎನ್ನಲಾಗಿದೆ. ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ನಾಶವಾಗಿವೆ.
ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹತ್ತಿರಬಹುದು ಎಂದು ಅಗ್ನಿ ಶಾಮಕ ಸೇವೆಯ ಸಿಬ್ಬಂದಿ ತಿಳಿಸಿದರು.
ಬೆಂಕಿಯ ಜ್ವಾಲೆಗಳು ಅಲ್ಕಪಕ್ಕದ ಮಳಿಗೆಗಳಿಗೆ ಬಡಿದರೂ ಯಾವುದೇ ಅಪಾಯವಾಗಿಲ್ಲ. ರಾತ್ರಿವೇಳೆಯಾದ ಕಾರಣ ಜೀವಗಳಿಗೂ ಹಾನಿಯಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.