ADVERTISEMENT

ರಿಪ್ಪನ್ ಪೇಟೆ: ಗಣಪನ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:42 IST
Last Updated 30 ಆಗಸ್ಟ್ 2025, 5:42 IST
ದುರ್ಗಾ ವಿನಾಯಕ ಸೇವಾ ಸಮಿತಿ ಗಣಪನ ವಿಸರ್ಜನಾ ಮೆರವಣಿಗೆ ದೃಶ್ಯ
ದುರ್ಗಾ ವಿನಾಯಕ ಸೇವಾ ಸಮಿತಿ ಗಣಪನ ವಿಸರ್ಜನಾ ಮೆರವಣಿಗೆ ದೃಶ್ಯ   

ರಿಪ್ಪನ್ ಪೇಟೆ : ಗ್ರಾಮದ ವಿನಾಯಕನಗರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ ಎಂಟನೇ ವರ್ಷದ ಗಣಪನ ರಾಜಭೀದಿ ಉತ್ಸವ ಶುಕ್ರವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಪ್ರತಿಷ್ಟಾಪನೆ ಮಾಡಿ, ಸಾಂಪ್ರದಾಯಿಕ ಪೂಜೆ ಪುನಸ್ಕಾರ ನೆರವೇರಿದವು.

ವಿಸರ್ಜನಾ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಡ್ರಂ ಸೆಟ್, ಗೊಂಬೆ ಕುಣಿತ ಮೆರವಣಿಗೆಗೆ ಮೆರಗು ನೀಡಿತು. ರಾಜ ಬೀದಿ ಉತ್ಸವದಲ್ಲಿ ಮಾತೆಯರು ಮಕ್ಕಳು ಹಾಗೂ ಯುವಕರು ಸೌಂಡ್ ಸಿಸ್ಟಮ್ ನ ನಾದಕ್ಕೆ ತಕ್ಕಂತೆ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.

ADVERTISEMENT

ವಿವಿಧ ಸಂಘ ಸಂಸ್ಥೆಗಳ ಹಲವು ಮುಖಂಡರು ಭಾಗಿಯಾಗಿದ್ದರು.
ತದನಂತರ ಕುಕ್ಕಳಲೆ ಹೊಂಡಲಗದ್ದೆ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.