ADVERTISEMENT

ಜಡ್ಜ್ ಎದುರೇ ವಕೀಲರಿಗೆ 'ನೀವು ಪಾಕಿಸ್ತಾನದವರು' ಎಂದ ಸಾಕ್ಷಿ!

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 4:03 IST
Last Updated 23 ಫೆಬ್ರುವರಿ 2020, 4:03 IST
ನ್ಯಾಯಾಲಯ
ನ್ಯಾಯಾಲಯ   

ಶಿವಮೊಗ್ಗ: ನ್ಯಾಯಾಲಯದ ಕಲಾಪ ನಡೆಯುವಾಗ ವಕೀಲರಿಗೆ ಅವಹೇಳನ ಮಾಡಿದ ಸಾಕ್ಷಿದಾರರಿಗೆ ಶಿವಮೊಗ್ಗ ಜೆಎಂಎಫ್‌ಸಿ ನ್ಯಾಯಾಲಯ ಗುರುವಾರ ಒಂದು ದಿನದ ಜೈಲು ಶಿಕ್ಷೆ ವಿಧಿಸಿದೆ.

ಪ್ರಕರಣವೊಂದರಲ್ಲಿ ಸಾಕ್ಷಿಯಾಗಿ ಬಂದಿದ್ದ ಭದ್ರಾವತಿ ತಾಲ್ಲೂಕು ಸಿದ್ಲಿಪುರದ ಶಂಕರ್, ವಕೀಲ ನಯಾಜ್ ಅಹಮದ್‌ ಅವರಿಗೆ ‘ನೀವು ಪಾಕಿಸ್ತಾನದವರು’ ಎಂದು ಅವಹೇಳನ ಮಾಡಿದ್ದಾರೆ.

ಶಂಕರ್ ವೃತ್ತಿಯಲ್ಲಿ ಇಟ್ಟಿಗೆ ವ್ಯಾಪಾರಿ. ಹೊಡೆದಾಟ ಪ್ರಕರಣದಲ್ಲಿ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಬಂದಿದ್ದರು. ವಕೀಲ ನಯಾಜ್ ಪಾಟಿಸವಾಲಿಗೆ ಒಳಪಡಿಸುತ್ತಿದ್ದ ಸಮಯದಲ್ಲಿ ಕೆಲವು ಪ್ರಶ್ನೆಗಳಿಗೆ ಆಕ್ರೊಶಗೊಂಡು ಅನುಚಿತ ಪದ ಬಳಸಿದ್ದಾರೆ. ನ್ಯಾಯಾಲಯ ಕಾರ್ಯಕಲಾಪಕ್ಕೆ ಅಡ್ಡಿ, ಅನುಚಿತ ವರ್ತನೆ ಆರೋಪದ ಮೇಲೆ ನ್ಯಾಯಾಧೀಶರಾದ ಜ್ಯೋತಿ ಪಾಟೀಲ್ ಶಿಕ್ಷೆ ವಿಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.