ADVERTISEMENT

ಈಶ್ವರಪ್ಪ ಗೋಗ್ರಾಸ ನೀಡುವಾಗ ದಿಢೀರ್ ತಿವಿದ ಹಸು: ಗಣ್ಯರು ಪಾರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 13:41 IST
Last Updated 3 ಜನವರಿ 2021, 13:41 IST
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೋಗ್ರಾಸ ನೀಡುತ್ತಿರುವುದು – ಪ್ರಜಾವಾಣಿ ಚಿತ್ರ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೋಗ್ರಾಸ ನೀಡುತ್ತಿರುವುದು – ಪ್ರಜಾವಾಣಿ ಚಿತ್ರ   

ಶಿವಮೊಗ್ಗ: ಬಿಜೆಪಿ ವಿಶೇಷ ಸಭೆಯ ಸಂದರ್ಭ ಗಣ್ಯರಿಗೆ ಹಸು ತಿವಿದ ಘಟನೆ ನಡೆದಿದೆ.

ರಾಜ್ಯ ಸರ್ಕಾರ ಗೋಹತ್ಯೆ ನಿಷೇಧಿಸಿ ಸುರ್ಗೀವಾಜ್ಞೆ ಹೊರಡಿಸಿದ ಕಾರಣ ಬಿಜೆಪಿ ವಿಶೇಷ ಸಭೆಗೂ ಮೊದಲು ಗೋ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ನಳಿನ್‌ಕುಮಾರ್ ಕಟೀಲ್‌, ಡಿ.ಎಚ್‌.ಶಂಕರ ಮೂರ್ತಿ ಮತ್ತಿತರರು ಇದ್ದರು. ಈಶ್ವರಪ್ಪ ಅವರು ಗೋಗ್ರಾಸ ನೀಡುವಾಗ ಹಸು ದಿಢೀರ್ ತಿವಿದಿದೆ. ತಕ್ಷಣ ಸಚಿವರು ಹಿಂದೆ ಸರಿದ ಕಾರಣ ಕೂದಲೆಳೆ ಅಂತರದಲ್ಲಿ ಸಚಿವರು ಅಪಾಯದಿಂದ ಪಾರಾಗಿದ್ದಾರೆ.

ಜನ ಸಂದಣಿ ಕಂಡು ಆರಂಭದಿಂದಲೂ ಹಸು ಗಾಬರಿಯಾಗಿತ್ತು. ಸಚಿವರು ಗೋಗ್ರಸ ನೀಡಲು ಮುಂದಾದಾಗ ವಿಚಲಿತಗೊಂಡು ತಿವಿಯಲು ಮುಂದಾಗಿದೆ. ಅದಕ್ಕೆ ಕಟ್ಟಿದ ಗೂಟವೇ ಕಿತ್ತುಕೊಂಡು ಹೋಗಿದೆ. ಹಸುವಿನ ಮಾಲೀಕರು ಸ್ಥಳದಲ್ಲಿ ಇದ್ದ ಕಾರಣ ಭಾರಿ ಅನಾಹಿತ ತಪ್ಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.