ಹೊಳೆಹೊನ್ನೂರು: ಪಟ್ಟಣ ಸಮೀಪದ ಶ್ರೀಕ್ಷೇತ್ರ ಕೂಡ್ಲಿ ಗ್ರಾಮದ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಅವರ 50ನೇ ವರ್ಷದ ವರ್ಧಂತಿ ಅಂಗವಾಗಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ, ‘ಶ್ರೀಮಠ ಹಾಗೂ ಲೋಕ ಕಲ್ಯಾಣಾರ್ಧವಾಗಿ ಮಠದ ಮೂಲ ದೇವರಾದ ಶ್ರೀ ವಿದ್ಯಾಶಂಕರ ಹಾಗೂ ಚಂದ್ರಮೌಳೇಶ್ವರಿಗೆ ರುದ್ರಾಭಿಷೇಕ, ರುದ್ರಹೋಮ, ಚಂಡಿ ಪಾರಾಯಣ, ಚಂಡಿಕಾ ಹವನ ಹಾಗೂ ಯಜ್ಞ ಯಾಗದಿ ಕಾರ್ಯಗಳು ಶ್ರೀಮಠದ ನಿಯಮದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗಿದೆ. ಮಠದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು’ ಎಂದು ಮನವಿ
ಮಾಡಿದರು.
ಪುರೋಹಿತರಾದ ದಾವಣಗೆರೆಯ ಪವನ್ ಕುಮಾರ್, ಶಿವಮೊಗ್ಗದ ಪ್ರಸನ್ನ ಭಟ್, ಹರೀಶ್ ಕಾರಂತ್, ಚಂದ್ರಶೇಖರ ಉಡುಪ, ಮಂಜುನಾಥ್ ಭಟ್, ಶ್ರೀನಿವಾಸ್, ಶ್ರೀಮಠದ ವ್ಯವಸ್ಥಾಪಕ ರಮೇಶ್ ಹುಲಿಮನಿ, ಮಠದ ಮಾಧ್ಯಮ ಪ್ರಮುಖ ವೆಂಕಟಸುಬ್ಬು ಮೋಕ್ಷಗೊಂಡಂ, ಶ್ರೀಮಠದ ಸಿಬ್ಬಂದಿ ಹಾಗೂ ನೂರಾರು ಭಕ್ತರು ಭಾಗವಹಿಸಿದ್ದರು.
ಭಕ್ತರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.