ADVERTISEMENT

ಶಿವಮೊಗ್ಗ: ಕಾರಿಗೆ ಲಾರಿ ಡಿಕ್ಕಿಯಾಗಿ ಯುವತಿ ಸಾವು

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 5:32 IST
Last Updated 9 ಜನವರಿ 2021, 5:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೊಸನಗರ: ತಾಲ್ಲೂಕಿನ ಕಾನುಗೋಡು ಸಮೀಪದ ಹೆರೆಟೆ ಬಳಿ ಕಾರಿಗೆ ಲಾರಿ ಡಿಕ್ಕಿ ಹೊಡೆದು ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದಾವಣಗೆರೆ ನಗರದ ಆಂಜನೇಯ ಬಡಾವಣೆಯ ನಿವಾಸಿ ಚಿನ್ಮಯಿ (23) ಮೃತಪಟ್ಟ ಯುವತಿ.

ಕೋಟೇಶ್ವರದಲ್ಲಿ ಕಾರ್ಯಕ್ರಮ ಮುಗಿಸಿ ಶ್ರೀನಿವಾಸ್‌ ಕುಟುಂಬ ದಾವಣಗೆರೆ ಕಡೆ ಸಾಗುತ್ತಿತ್ತು. ಕಾರಿನಲ್ಲಿ ಚಾಲಕ ಶಶಿಧರ್, ಶ್ರೀನಿವಾಸ್ ಹಾಗೂ ಪತ್ನಿ ಬೃಂದಾ, ಮಕ್ಕಳಾದ ಚಿನ್ಮಯಿ, ಲಾಸ್ಯ ಇದ್ದರು.

ADVERTISEMENT

ಶಿವಮೊಗ್ಗದಿಂದ ಮಂಗಳೂರು ಕಡೆ ಸಾಗುತ್ತಿದ್ದ ಸಿಮೆಂಟ್ ತುಂಬಿದ ಲಾರಿ ಪಲ್ಟಿ ಹೊಡೆದು ಕಾರಿಗೆ ಡಿಕ್ಕಿ ಹೊಡೆದಿದೆ. ಚಿನ್ಮಯಿಗೆ ತಲೆಗೆ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕ ಸೇರಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಥಳಕ್ಕೆಸಿಪಿಐ ಜಿ.ಕೆ.ಮಧುಸೂದನ್, ಪಿಎಸ್ಐ ಶಿವರಾಜ್, ಪಟ್ಟಣ ಪಂಚಾ
ಯಿತಿ ಮಾಜಿ ಅಧ್ಯಕ್ಷ ಶ್ರೀಪತಿರಾವ್, ಮುರಳಿರಾವ್, ಜೆಸಿಐನ ಚಿತ್ತಾರ ಮುರಳಿ, ವಿಶ್ವೇಶ್ವರಭೇಟಿ ನೀಡಿದರು. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.