ಸಾಗರ:ಹಾಲಿ ಕಾರ್ಗಲ್ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯಾಗಿರುವ ಜಗದೀಶ್ ನಾಯ್ಕ್ ಅವರು ಸ್ಥಳೀಯ ಹೋಟೆಲ್ ಒಂದರಲ್ಲಿ ದೀರ್ಘಕಾಲ ಊಟ, ತಿಂಡಿ ಮಾಡಿ ₹ 80 ಸಾವಿರ ನೀಡದೇ ಸತಾಯಿಸುತ್ತಿರುವ ವಿಷಯ ಇಲ್ಲಿನತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪವಾಯಿತು.
‘ಬಾಕಿ ಹಣ ವಸೂಲಾಗದಿದ್ದರೆ ತಾನು ವಿಷ ಕುಡಿಯಬೇಕಾದೀತೆಂದು ಊಟ, ತಿಂಡಿ ನೀಡಿದ ಹೋಟೆಲ್ ಮಾಲೀಕ ನನ್ನ ಬಳಿ ಬಂದು ಅಹವಾಲು ತೋಡಿಕೊಂಡಿದ್ದಾರೆ. ಕೂಡಲೇ ಆ ಹೋಟೆಲ್ ಮಾಲೀಕರಿಗೆ ನೀಡಬೇಕಾದ ಬಾಕಿ ಪಾವತಿ ಮಾಡಿ’ ಎಂದು ಶಾಸಕಎಚ್. ಹಾಲಪ್ಪ ಹರತಾಳು ಅಧಿಕಾರಿಗೆ ತಾಕೀತು ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.