ADVERTISEMENT

ಆಮ್ನಿ ಪಲ್ಟಿ: ಚಾಲಕ ಸಾವು, 9 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 4:16 IST
Last Updated 25 ಅಕ್ಟೋಬರ್ 2021, 4:16 IST

ಸಾಗರ: ತಾಲ್ಲೂಕಿನ ಕೆಳದಿಪುರ ಸಮೀಪದ ಸುಳಗೋಡು ಗ್ರಾಮದ ಬಳಿ ಭಾನುವಾರ ಆಮ್ನಿ ಪಲ್ಟಿ ಹೊಡೆದು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, 9 ಜನರು
ಗಾಯಗೊಂಡಿದ್ದಾರೆ.

ಚಾಲಕ ಸುರೇಶ್ ಕೆಳದಿಪುರ (45) ಮೃತಪಟ್ಟವರು. ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ರಸ್ತೆ ಪಕ್ಕದಲ್ಲಿ ನಿಂತಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಾಗರದ ಷಾಹಿ ಗಾರ್ಮೆಂಟ್ಸ್‌ಗೆ ಮಾಸೂರು ಕೆಳದಿ, ಕೆಳದಿಪುರ ಗ್ರಾಮದಿಂದ ನಾಲ್ವರು ಆಮ್ನಿಯಲ್ಲಿ ಕೆಲಸಕ್ಕೆ ಬರುತ್ತಿದ್ದರು.

ADVERTISEMENT

ಸುಳಗೋಡು ಗ್ರಾಮದ ಸಮೀಪ ಆಮ್ನಿಯ ಬ್ರೇಕ್ ಫೇಲ್ ಆಗಿದೆ. ಚಾಲಕನ ನಿಯಂತ್ರಣ ತಪ್ಪಿದ ಆಮ್ನಿ ರಸ್ತೆ ಪಕ್ಕದಲ್ಲಿ ಬಸ್‍ಗೆ ಕಾಯುತ್ತಾ ನಿಂತಿದ್ದ
ಐವರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ದೀಪಾ, ಆಶಾ, ಅರ್ಪಿತಾ, ಕಲಾವತಿ, ಚೈತ್ರ, ಶ್ಯಾಮ, ರೇಣುಕಾ, ಜಯಶ್ರೀ, ಶಾಂಭವಿ ಅವರಿಗೆ ಗಾಯವಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅರ್ಪಿತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.