ADVERTISEMENT

ಏ.28ರಂದು ‘ಸ್ವರ ಸಂದ್ಯಾ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 10:32 IST
Last Updated 26 ಏಪ್ರಿಲ್ 2019, 10:32 IST

ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಏ.28ರಂದು ಸಂಜೆ 6ಕ್ಕೆ ‘ಸ್ವರ ಸಂದ್ಯಾ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಪ್ತಸ್ವರ ಸಂಗೀತ ಸಭಾ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಉಳಿಸಲು ಮತ್ತು ಬೆಳೆಸಲು ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಸಭಾದ ಕಾರ್ಯದರ್ಶಿ ಕೆ.ಜಿ.ಕುಮಾರಶಾಸ್ತ್ರಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೆಂಗಳೂರಿನ ಗೀತಾ ಹೆಗಡೆ ಅವರ ಶಿಷ್ಯೆ ವಿದುಲಾ ವೇಣುಗೋಪಾಲ ಮತ್ತು ಮೈಸೂರಿನ ಶಾರದಾ ಭಟ್ಕಟ್ಟಿಗೆ ಗಾಯನ ನಡೆಸಿಕೊಡುವರು. ರೇಖಾ ಅರುಣ ಹಂಪಿಹೊಳಿ ಹಾರ್ಮೋನಿಯಂ, ಭೀಮಾಶಂಕರ ಬೀದನೂರು ತಬಲವಾದನ ಇರುತ್ತದೆ ಎಂದು ವಿವರ ನೀಡಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಸಭಾದ ಜಂಟಿ ಕಾರ್ಯದರ್ಶಿ ಎನ್.ಎಚ್.ದೇವಕುಮಾರ್, ನಿರ್ದೇಶಕರಾದ ವಿವೇಕಾನಂದ ನಾಯಕ್, ಎನ್.ಬಿ.ರವೀಶ್, ಶಂಕರ ಅಜ್ಜಂಪುರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.