ADVERTISEMENT

ಸೆರೆ ಹಿಡಿದ ಆನೆ ಭದ್ರಾ ಅಭಯಾರಣ್ಯಕ್ಕೆ?

ವದಂತಿ ನಿರಾಕರಿಸಿದ ವನ್ಯಜೀವಿ ವಿಭಾಗದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 14:57 IST
Last Updated 20 ಡಿಸೆಂಬರ್ 2019, 14:57 IST
ಸಕ್ರೆಬೈಲ್ ಬಿಡಾರದಲ್ಲಿ ಚಿತ್ರದುರ್ಗದಲ್ಲಿ ಸೆರೆ ಸಿಕ್ಕ ಆನೆ.
ಸಕ್ರೆಬೈಲ್ ಬಿಡಾರದಲ್ಲಿ ಚಿತ್ರದುರ್ಗದಲ್ಲಿ ಸೆರೆ ಸಿಕ್ಕ ಆನೆ.   

ಶಿವಮೊಗ್ಗ: ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ಬಳಿ ಸೆರೆಹಿಡಿದು ಸಕ್ರೆಬೈಲಿನ ಬಿಡಾರಕ್ಕೆ ತಂದಿದ್ದ 22 ವರ್ಷದ ಆನೆಯನ್ನು ಭದ್ರಾಅಭಯಾರಣ್ಯಕ್ಕೆಬಿಡಲು ವನ್ಯಜೀವಿ ವಿಭಾಗದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಆನೆ ಸೌಮ್ಯ ಸ್ವಭಾವ ಹೊಂದಿದೆ.ಜೋಗಿಮಟ್ಟಿ ಪ್ರದೇಶದಲ್ಲಿ ಸೆರೆ ಹಿಡಿಯುವ ಮೊದಲೂ ಯಾವುದೇ ಜೀವ ಹಾನಿ ನಡೆಸಿಲ್ಲ. ಬೆಳೆಹಾನಿ ಮಾಡುತ್ತಿದೆ ಎಂಬ ರೈತರ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಸೆರೆ ಹಿಡಿದಿದ್ದರು. ಬಿಡಾರಕ್ಕೆ ಬಂದ ನಂತರವೂ ಸೌಮ್ಯ ವರ್ತನೆ ತೋರಿದೆ. ಅಕ್ರಮಣಕಾರಿಯಾಗಿ ವರ್ತಿಸಿಲ್ಲ.ಸಕ್ರೆಬೈಲ್‌ ಆನೆ ಬಿಡಾರದಲ್ಲಿ ಪ್ರಸ್ತುತ 25 ಆನೆಗಳಿವೆ. ಹೈಕೋರ್ಟ್‌ ನಿರ್ದೇಶನದಂತೆ ಯಾವುದೇ ಬಿಡಾರದಲ್ಲಿ 15ಕ್ಕಿಂತ ಹೆಚ್ಚು ಆನೆಗಳು ಇರುವಂತಿಲ್ಲ. ಈ ಎಲ್ಲ ಕಾರಣಗಳಿಂದ ಆನೆಯನ್ನು ಮತ್ತೆ ಕಾಡಿಗೇ ಬಿಡಲಾಗುತ್ತಿದೆ ಎಂದು ಸುದ್ದಿ ಹರಿದಾಡುತ್ತಿದೆ.

ಆನೆ ಕೊರಳಿಗೆರೇಡಿಯೊ ಕಾಲರ್‌ ಅಳವಡಿಸಿ, ಮೊಬೈಲ್‌ ತಂತ್ರಾಂಶದ ಮೂಲಕ ಅದರ ಚಲನವಲನಗಳ ಮೇಲೆ ನಿಗಾವಹಿಸಲು ಆಲೋಚಿಸಲಾಗಿದೆ. ಆನೆ ಯಾವುದೇ ಪ್ರದೇಶದಲ್ಲಿ ಇದ್ದರೂ ಪತ್ತೆ ಹಚ್ಚಬಹುದು. ಜನನಿಬಿಡ ಪ್ರದೇಶಗಳತ್ತ ಸಾಗಿದರೂ ತಕ್ಷಣ ಮಾಹಿತಿ ದೊರೆಯುತ್ತದೆ ಎನ್ನಲಾಗಿದೆ.

ADVERTISEMENT

‘ಸೆರೆ ಹಿಡಿದ ಆನೆಯನ್ನು ಮತ್ತೆ ಕಾಡಿಗೆ ಬಿಡುವ ಯಾವುದೇ ಪ್ರಸ್ತಾವ ಇಲಾಖೆಯ ಮುಂದಿಲ್ಲ. ಮೇಲಧಿಕಾರಿಗಳಿಂದ ಆದೇಶ ಬಂದರಷ್ಟೇ ಪರಿಶೀಲಿಸಲಾಗುವುದು.ಒಮ್ಮೆ ಹಿಡಿದ ಆನೆಯನ್ನು ಮತ್ತೆ ಕಾಡಿಗೆ ಬಿಟ್ಟ ಉದಾಹರಣೆಯೇ ಇಲ್ಲ’ ಎನ್ನುತ್ತಾರೆ ವನ್ಯಜೀವಿ ವಿಭಾಗದ ಡಿಎಫ್‌ಒ ಐ.ಎಂ.ನಾಗರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.