ADVERTISEMENT

ಶಿವಮೊಗ್ಗ: ವಾಜಪೇಯಿ ಬಡಾವಣೆ ಹಗರಣಕ್ಕೆ ಎಳ್ಳುನೀರು

ತಪ್ಪಿಸ್ಥರ ರಕ್ಷಿಸಲು ಸಚಿವರ ಹುನ್ನಾರ: ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 13:07 IST
Last Updated 6 ಜೂನ್ 2020, 13:07 IST
ಕೆ.ಬಿ. ಪ್ರಸನ್ನಕುಮಾರ್
ಕೆ.ಬಿ. ಪ್ರಸನ್ನಕುಮಾರ್   

ಶಿವಮೊಗ್ಗ: ನಗರಾಭಿವೃದ್ದಿ ಪ್ರಾಧಿಕಾರನಿರ್ಮಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆ ಹಗರಣದ ತನಿಖೆಯ ವರದಿ ಪರಿಶೀಲಿಸುವ ಮೊದಲೇನಗರಾಭಿವೃದ್ಧಿ ಸಚಿವರು ಹಿಂದಕ್ಕೆ ಪಡೆಯುವ ಹೇಳಿಕೆ ಹಗರಣ ಮುಚ್ಚಿ ಹಾಕುವಹುನ್ನಾರ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆರೋಪಿಸಿದರು.

ವಾಜಪೇಯಿ ಬಡಾವಣೆಯಲ್ಲಿ ನಡೆದಿದ್ದಹಗರಣದ ತನಿಖೆಯನ್ನುಲೋಕಾಯುಕ್ತಕ್ಕೆ ವಹಿಸಲಾಗಿತ್ತು. ಈಗ ಲೋಕಾಯುಕ್ತ ವರದಿ ಬಿಡುಗಡೆಯಾಗಿದೆ.ನಿವೇಶನ ಹಂಚಿಕೆಯಲ್ಲಿ ಹಗರಣನಡೆದಿರುವುದುಸಾಬೀತಾಗಿದೆ. ನಿಯಮಗಳನ್ನು ಮೀರಿ ನಿವೇಶನಗಳನ್ನು ಹಂಚಿಕೆ ಮಾಡಿರುವುದನ್ನು ವರದಿಯಲ್ಲಿಉಲ್ಲೇಖಿಸಲಾಗಿದೆ.ಈ ವರದಿಸರ್ಕಾರಕ್ಕೆಸಲ್ಲಿಸುವ ಮೊದಲೇಪ್ರಕರಣ ವಾಪಸ್‌ ಪಡೆಯುವ ಸಂಚು ನಡೆದಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಈಗಾಗಲೇ ವರದಿಯಲ್ಲಿ ಬೆಚ್ಚಿ ಬೀಳುವ ಸಂಗತಿಗಳು ಬಯಲಾಗಿವೆ. ಬಿಜೆಪಿ ಕಾರ್ಯಕರ್ತರಿಗೆ, ಶ್ರೀಮಂತರಿಗೆ, ಪ್ರಾಧಿಕಾರದ ಸಿಬ್ಬಂದಿಗೆ, ಒಂದೇ ಕುಟುಂಬದ ಹಲವರಿಗೆ, ಅಪ್ರಾಪ್ತರಿಗೆ, ವಿಳಾಸವೇ ಇಲ್ಲದವರಿಗೆ,ಸರ್ಕಾರಿನೌಕರರಿಗೆ, ಈಗಾಗಲೇ ಹಲವು ಮಹಲುಗಳು ಇರುವವರಿಗೆ ನಿಯಮಗಳನ್ನು ಗಾಳಿಗೆ ತೂರಿ ಕೊಟ್ಯಂತರ ಬೆಲೆ ಬಾಳುವ ನಿವೇಶನಗಳನ್ನು ಅಕ್ರಮವಾಗಿ ವಿತರಿಸಲಾಗಿದೆ. ವಿವೇಚನಾ ಕೋಟಾದಡಿ 142 ಜನರಿಗೆ ನಿವೇಶನ ನೀಡಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸರ್ಕಾರ ಪ್ರಕರಣ ಹಿಂದಕ್ಕೆ ಪಡೆದರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ. ಕಾನೂನು ಮೊರೆ ಹೋಗಲಿದೆ ಎಂದು ಎಚ್ಚರಿಸಿದರು.

ADVERTISEMENT

ಲೋಕಾಯುಕ್ತ ತನಿಖೆ ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷರಾದ ಎಸ್.ಜ್ಞಾನೇಶ್ವರ್ ಮತ್ತು ಎಸ್.ದತ್ತಾತ್ರಿಅವಧಿಯಲ್ಲಿ ಕಾಲಾವಧಿಯಲ್ಲಿ ಈ ಹಗರಣಗಳು ನಡೆದಿವೆ.ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಕೈವಾಡವೂ ಇದೆ. ತಮ್ಮ ಬೆಂಬಲಿಗರನ್ನು ಹಗರಣದಿಂದ ರಕ್ಷಿಸುವ ಪ್ರಯತ್ನದ ಭಾಗವಾಗಿ ನಗರಾಭಿವೃದ್ಧಿ ಸಚಿವ ಸಚಿವ ಬೈರತಿ ಬಸವರಾಜ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆಎಂದು ಆರೋಪಿಸಿದರು.

ವಾಜಪೇಯಿ ಬಡಾವಣೆಯ ನಿವೇಶನಹಂಚಿಕೆಹಗರಣದವಿವಾದ ಹಿಂಪಡೆದು ಅರ್ಹಅರ್ಜಿದಾರರಿಗೆ ನಿವೇಶನ ನೀಡುತ್ತೇವೆ ಎಂದಿದ್ದಾರೆ.ಇದುಹಗರಣ ಮುಚ್ಚಿ ಹಾಕುವ ಯೋಚನೆ. ತಕ್ಷಣ ಲೋಕಾಯುಕ್ತ ವರದಿಸರ್ಕಾರಕ್ಕೆಸಲ್ಲಿಸಬೇಕು. ಅದರ ಆಧಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಿಜವಾದ ಫಲಾನುಭವಿಗಳಿಗೆ ನಿವೇಶನ ಸಿಗಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ‘ಸೂಡಾ’ ಮಾಜಿ ಅಧ್ಯಕ್ಷ ಇಸ್ಮಾಯಿಲ್‌ ಖಾನ್,ಪಾಲಿಕೆ ಸದಸ್ಯರಾದರೇಖಾ ರಂಗನಾಥ್, ಆರ್.ಸಿ.ನಾಯಕ್, ಯಮುನಾ ರಂಗೇಗೌಡ, ಮಂಜುಳಾ ಶಿವಣ್ಣ, ಶಾಮೀರಾಖಾನ್, ಕಾಂಗ್ರೆಸ್‌ ಮುಖಂಡರಾದ ದೀಪಕ್‌ಸಿಂಗ್,ಆಸೀಫ್, ಸುನೀಲ್, ರಘುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.