ADVERTISEMENT

ಮದ್ಯ ನಿಷೇಧದ ಕನಸು ಕಂಡಿದ್ದರು ಗಾಂಧೀಜಿ: ಸಖಾಫಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 14:12 IST
Last Updated 2 ಅಕ್ಟೋಬರ್ 2019, 14:12 IST
ಶಿವಮೊಗ್ಗದಲ್ಲಿ ಬುಧವಾರ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರುದ್ಧ ಜನಜಾಗೃತಿ ಕಾರ್ಯಕ್ರಮ.
ಶಿವಮೊಗ್ಗದಲ್ಲಿ ಬುಧವಾರ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರುದ್ಧ ಜನಜಾಗೃತಿ ಕಾರ್ಯಕ್ರಮ.   

ಶಿವಮೊಗ್ಗ: ಮಹಾತ್ಮ ಗಾಂಧೀಜಿ ದೇಶಾದ್ಯಂತ ಮದ್ಯಪಾನ, ಮಾದಕ ದ್ರವ್ಯಗಳ ಮಾರಾಟ ನಿಷೇಧಿಸುವ ಕನಸು ಕಂಡಿದ್ದರು ಎಂದು ಎಸ್ಎಸ್ಎಫ್‌ ರಾಜ್ಯ ಉಪಾಧ್ಯಕ್ಷ ಹಾಫಿಲ್ ಸುಫಿಯಾನ್ ಸಖಾಫಿ ಹೇಳಿದರು.

ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್ಎಸ್ಎಫ್) ಶಿವಮೊಗ್ಗ ವಿಭಾಗದ ಕ್ಯೂ ಟೀಮ್ ಗಾಂಧಿ ಜಯಂತಿ ಅಂಗವಾಗಿ ಗಾಂಧೀಜಿ ಕನಸು ನನಸಾಗಲಿ ಎಂಬ ಘೋಷವಾಕ್ಯದೊಂದಿಗೆ ಬುಧವಾರ ಗೋಪಿವೃತ್ತದಲ್ಲಿ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರುದ್ಧ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಕರು ಮಾದಕ ದ್ರವ್ಯಗಳಿಗೆ ಬಲಿಯಾಗಿ ಉಜ್ವಲ ಭವಿಷ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ಕುಟುಂಬಗಳೂ ಛಿದ್ರವಾಗುತ್ತಿವೆ. ಈ ಕುರಿತು ಸಂಘಟನೆ ರಾಜ್ಯದ ಎಲ್ಲೆಡೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಾದಕ ದ್ರವ್ಯದ ವಿರುದ್ಧ ಪೊಸ್ಟರ್ ಪ್ರದರ್ಶನ, ಬೀದಿ ಭಾಷಣ ಮತ್ತು ಬಿತ್ತಿಪತ್ರಗಳನ್ನು ಹಂಚುವುದರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರ ನೀಡಿದರು.

ADVERTISEMENT

ವಿದ್ಯಾರ್ಥಿಗಳು ಮಾದಕ ದ್ರವ್ಯ ಮಾಫಿಯಾಕ್ಕೆ ಒಳಗಾಗುವುದ ತಡೆಯಲು ಅಧಿಕಾರಿಗಳು, ಸಾರ್ವಜನಿಕರು ಸಜರಿಸಬೇಕು ಎಂದು ಕೋರಿದರು.
ಎಸ್ಎಸ್ಎಫ್ ರಾಜ್ಯ ಸದಸ್ಯ ಅಬ್ದುಲ್ ಲತೀಫ್ ಸವದಿ, ಅಕ್ಬರ್, ಅಶ್ರಫ್, ಸಾದತ್, ಶೌಕತ್, ಖಲಂದರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.