ADVERTISEMENT

ಬೀದಿಯಲ್ಲೇ ಸಚಿವ ಈಶ್ವರಪ್ಪ ಕಾಲಿಗೆರಗಿದ ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 1 ಮೇ 2020, 13:50 IST
Last Updated 1 ಮೇ 2020, 13:50 IST
ನಾಗರಾಜ್
ನಾಗರಾಜ್   

ಶಿವಮೊಗ್ಗ: ಸಾರ್ವಜನಿಕರಿಗೆ ಆಹಾರ ಪಾದಾರ್ಥಗಳ ಕಿಟ್‌ ಹಂಚಲು ಶುಕ್ರವಾರ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕಾಲಿಗೆ ತಹಶೀಲ್ದಾರ್ ನಾಗರಾಜ್ ಅವರುಬೀದಿಯಲ್ಲೇ ನಮಸ್ಕರಿಸಿದರು.

ದಾವಣಗೆರೆ ಜಿಲ್ಲೆ ಚನ್ನಗಿರಿಯಿಂದ ಶಿವಮೊಗ್ಗಕ್ಕೆ ವರ್ಗಾವಣೆಯಾಗಿ ಬಂದಿರುವ ಅವರು ಗುರುವಾರ ಅಧಿಕಾರ ಸ್ವೀಕರಿಸಿದ್ದರು. ಕೆ.ಆರ್.ಪುರ ರಸ್ತೆಯಲ್ಲಿ ಓಂ ಶಕ್ತಿ ಭಕ್ತರಿಗೆ ಹಮ್ಮಿಕೊಂಡಿದ್ದಕಿಟ್‌ ವಿತರಣಾ ಕಾರ್ಯಕ್ರಮಕ್ಕೆ ಸಚಿವರು ಬಂದಾಗ, ಪರಿಚಯ ಮಾಡಿಕೊಂಡು ಕಾಲಿಗೆರಗಿದರು.

ತಹಶೀಲ್ದಾರ್ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದೆ. ಇಂಥವರಿಂದ ಪಕ್ಷಾತೀತ ಆಡಳಿತ ಸಾಧ್ಯವೇ? ಇವರುಕೆಈಎಸ್(ಕೇವಲ ಈಶ್ವರಪ್ಪ ಸೇವೆ)ಅಧಿಕಾರಿ, ‘ಈಶ ಸೇವೆಯೇ ದೇಶ ಸೇವೆ’ ಎಂದುಕೊಂಡ ಅಧಿಕಾರಿ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.