ADVERTISEMENT

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:45 IST
Last Updated 19 ಸೆಪ್ಟೆಂಬರ್ 2021, 4:45 IST
ಭದ್ರಾವತಿಯಲ್ಲಿ ಶನಿವಾರ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಿತು
ಭದ್ರಾವತಿಯಲ್ಲಿ ಶನಿವಾರ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಿತು   

ಭದ್ರಾವತಿ: ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಶನಿವಾರ ನಗರದಲ್ಲಿ ಸಂಭ್ರಮದಿಂದ ನಡೆಯಿತು.

9 ದಿನಗಳಿಂದ ಪ್ರತಿಷ್ಠಾಪಿಸಿದ್ದಹೊಸಮನೆ ಹಿಂದೂ ಮಹಾಸಭಾ ಮುಖ್ಯದ್ವಾರದಿಂದ ಅಲಂಕೃತ ರಥದಲ್ಲಿ ಮೆರವಣಿಗೆ ಹೊರಟಿತು.ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಹೆಜ್ಜೆ ಹಾಕುವ ಮೂಲಕ ಘೋಷಣೆ ಕೂಗುತ್ತಾ ಕೈಯಲ್ಲಿ ಕೇಸರಿ ಧ್ವಜ ಹಿಡಿದು ಸಾಗಿದರು.

ಯುವಕರ ಚಪ್ಪಾಳೆ ಜತೆಗೆ ಜೈಶ್ರೀರಾಂ ಘೋಷಣೆ, ಪೊಲೀಸ್ ಪಹರೆ, ಧ್ವಜಗಳ ಹಿಡಿದಿದ್ದ ಯುವಕರ ಉತ್ಸಾಹ,ಪ್ರಮುಖ ವೃತ್ತದಲ್ಲಿ ಪಟಾಕಿ ಸಿಡಿತದ ಜತೆಗೆ ಹೂವಿನ ಸುರಿಮಳೆ ಗಮನ ಸೆಳೆಯಿತು.

ADVERTISEMENT

ಹೊಸಮನೆ ರಸ್ತೆ, ಚನ್ನಗಿರಿ ರಸ್ತೆ ಮೂಲಕ ಭದ್ರಾನದಿಯಲ್ಲಿ ಗಣಪತಿ ವಿಸರ್ಜನೆ ನಡೆಯಿತು.ಆಯಕಟ್ಟಿನ ಸ್ಥಳದಲ್ಲಿ ಡಿಎಆರ್, ಕೆಎಸ್ಆರ್‌ಪಿ ತುಕುಡಿ ನಿಯೋಜಿಸಲಾಗಿತ್ತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಗಣಪತಿ ದರ್ಶನ ಪಡೆದರು. ಹಿಂದೂ ಮಹಾಸಭಾ ಅಧ್ಯಕ್ಷ ವಿ. ಕದಿರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.