
ಶಿಕಾರಿಪುರ: ವ್ಯಾಲೆಂಟೈನ್ ಡೇ ಹೆಸರಿನಲ್ಲಿ ಸಮಾಜದಲ್ಲಿ ನಡೆಯುವ ಅನಾಚಾರ ತಡೆಯಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
‘ಹಲವು ವರ್ಷಗಳಿಂದ ಫೆ. 14 ವ್ಯಾಲಂಟೈನ್ ಡೇ ಎಂದು ಆಚರಿಸುವ ಪದ್ಧತಿ ಯುವ ಸಮೂಹದಲ್ಲಿ ಹೆಚ್ಚಾಗಿದೆ. ಅದು ವ್ಯಾಪಾರಿ ಲಾಭಕ್ಕಾಗಿ ಆರಂಭಗೊಂಡು ಇದೀಗ ಭೋಗ ಸಂಸ್ಕೃತಿ, ಸ್ವೇಚ್ಛಾಚಾರಕ್ಕೆ ಕಾರಣವಾಗುತ್ತಿರುವುದು ಕಳವಳಕಾರಿ’ ಎಂದು ಹಿಂದೂ ಜನಜಾಗೃತಿ ಸಮಿತಿಯ ಪರಶುರಾಮ್ ಹೇಳಿದರು.
‘ಪ್ರೇಮದ ಪ್ರದರ್ಶನ ಮಾಡುವ ಸಂದರ್ಭದಲ್ಲಿ ಯುವತಿಯರ ಮೇಲೆ ಕಿರುಕುಳ, ಹಿಂಸಾಚಾರ, ಒತ್ತಡ ಆಗುತ್ತಿರುವ ಘಟನೆ ನಡೆಯುತ್ತಿದ್ದು, ಅದು ಬೆದರಿಕೆ, ಆತ್ಮಹತ್ಯೆಗೆ ಕುಮ್ಮಕ್ಕು ನೀಡುವ ಹಂತಕ್ಕೆ ತಲುಪಿದೆ. ಶೈಕ್ಷಣಿಕ ಜೀವನ, ಆರೋಗ್ಯ, ಕೌಟುಂಬಿಕ ಸಂಬಂಧಗಳು ಹಾಳಾಗುತ್ತಿವೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಪ್ರೇಮ ದಿನದ ಹೆಸರಿನ ಅನಾಚಾರ ತಪ್ಪಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಬಿ.ವಿ.ಮಂಜುನಾಥ್, ಕಲ್ಪವೃಕ್ಷ ಸೇವಾ ಟ್ರಸ್ಟ್ನ ವಿ.ರಘು, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಶಿವಯ್ಯ, ಶ್ರೀನಿವಾಸ್, ಮಂಜುನಾಥ್ ಇತರರಿದ್ದರು.