ಸಾಗರ: ವರ್ಲಿ ಚಿತ್ತಾರ ಕಲೆಯನ್ನು ಪ್ರಚುರ ಪಡಿಸುತ್ತಿರುವ ಸಾಧನೆಗಾಗಿ ವರ್ಲಿ ಚಿತ್ತಾರ ಕಲಾವಿದ ರೂಪೇಶ್ ಎಸ್ ಅವರ ಹೆಸರು ಇನ್ಫ್ಲುಯೆನ್ಸರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಯಾಗಿದೆ.
ರೂಪೇಶ್ ಅವರು ಸಮೀಪದ ಉಳ್ಳೂರು ಗ್ರಾಮದ ಶ್ರೀ ಸಿಗಂದೂರೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಗಂಗೋತ್ರಿ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.
ಬುಡಕಟ್ಟು ಪರಂಪರೆಗೆ ಸೇರಿದ ವರ್ಲಿ ಚಿತ್ತಾರ ಕಲೆಯನ್ನು ಸಮುದಾಯಕ್ಕೆ ತಲುಪಿಸುವಲ್ಲಿ ರೂಪೇಶ್ ಮಹತ್ವದ ಕೊಡುಗೆ ನೀಡಿರುವುದನ್ನು ಗುರುತಿಸಿರುವ ಜೈಪುರದ ರಾಜಸ್ತಾನ್ ಇಂಟರ್ ನ್ಯಾಷನಲ್ ಸೆಂಟರ್ ಸಂಸ್ಥೆಯು ಈಚೆಗೆ ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೂಪೇಶ್ ಅವರನ್ನು ಸನ್ಮಾನಿಸಿ ಪುರಸ್ಕಾರ ಪ್ರಧಾನ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.