ADVERTISEMENT

‘ನಾನು ಸಮರ್ಥ ಸಂಸದ’

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 6:05 IST
Last Updated 18 ಮಾರ್ಚ್ 2014, 6:05 IST

ಚಿಕ್ಕನಾಯಕನಹಳ್ಳಿ: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ₨ 1.75 ಸಾವಿರ ಕೋಟಿ ಅನುದಾನ ತರುವ ಮೂಲಕ ಸಮರ್ಥ ಸಂಸದ ಎಂಬುದನ್ನು ಸಾಬೀತು ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್‌.­ಬಸವರಾಜು ಕಿಡಿಕಾರಿದರು.

ತಾಲ್ಲೂಕಿನ ಗೋಡೇಕೆರೆ ಸುಕ್ಷೇತ್ರ­ದಲ್ಲಿ ಸಿದ್ದರಾಮೇಶ್ವರ ದೇವರಿಗೆ ಸೋಮವಾರ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿ ಮಾತ­ನಾಡಿದರು.

ನೀರು, ರೈಲ್ವೆ, ರಸ್ತೆ ಹಾಗೂ ಗುಡಿಕೈಗಾರಿಕೆಗಳನ್ನು ಆದ್ಯತೆಯ ಕ್ಷೇತ್ರಗಳೆಂದು ಪರಿಗಣಿಸಿ, ಕ್ಷೇತ್ರದ ಅಭಿವೃದ್ಧಿಗೆ ಯತ್ನಿಸಿದ್ದೇನೆ ಎಂದು ತಿಳಿಸಿದರು.

ಮುಖಂಡರಾದ ಗುಬ್ಬಿಯ ಪರ­ಮೇಶ್ವ­ರಪ್ಪ, ತುರುವೇಕೆರೆ ಶಿವಣ್ಣ, ದೊಂಬರನಹಳ್ಳಿ ಬಸವರಾಜು, ಬುಳ್ಳೇನಹಳ್ಳಿ ಪ್ರಕಾಶ್, ವಕೀಲ ಷಣ್ಮುಖಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.