ADVERTISEMENT

ಎಸಿಬಿ ಬಲೆಗೆ ಮಡೆನೂರು ಗ್ರಾಮ ಲೆಕ್ಕಿಗ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 16:03 IST
Last Updated 15 ಅಕ್ಟೋಬರ್ 2019, 16:03 IST
   

ತಿಪಟೂರು: ತಾಲ್ಲೂಕಿನ ಮಡೆನೂರು ಗ್ರಾಮ ಲೆಕ್ಕಿಗ ರವಿಶಂಕರ್ ಕಂದಾಯ ಸ್ವತ್ತಿನ ಖಾತೆ ಬದಲಾವಣೆ ಮಾಡಲು ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಮಡೆನೂರು ಗ್ರಾಮದ ಉಮೇಶ್ ಎಂಬುವವರು ತಮ್ಮ ಅಕ್ಕನಿಗಾಗಿ ಕ್ರಯಕ್ಕೆ ಜಮೀನನ್ನು ಖರೀದಿಸಿದ್ದರು. ಖರೀದುದಾರರ ಹೆಸರಿಗೆ ಸ್ವತ್ತನ್ನು ಖಾತೆ ಬದಲಾವಣೆ ಮಾಡಿಕೊಡಲು ರವಿಶಂಕರ್ ₹ 30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.

ಉಮೇಶ್ ಮೊದಲ ಕಂತಾಗಿ ₹ 5 ಸಾವಿರವನ್ನು ಫೋನ್ ಪೇ ಮುಖಾಂತರ ರವಿಶಂಕರ್ ಖಾತೆಗೆ ವರ್ಗಾವಣೆ ಮಾಡಿದ್ದರು. ಉಳಿದ ₹ 25 ಸಾವಿರ ನೀಡುವ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಉಪಾಧೀಕ್ಷಕ ಉಮಾಶಂಕರ್ ಕಾರ್ಯಾಚರಣೆಯನ್ನು ನಡೆಸಿ ವಶಕ್ಕೆ ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.