ADVERTISEMENT

ತಡೆಗೋಡೆಗೆ ಬೈಕ್ ಡಿಕ್ಕಿ: ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 9 ಮೇ 2019, 9:04 IST
Last Updated 9 ಮೇ 2019, 9:04 IST
ಅಪಘಾತದಲ್ಲಿ‌ ನುಜ್ಜು ಗುಜ್ಜಾಗಿರುವ ಬೈಕ್
ಅಪಘಾತದಲ್ಲಿ‌ ನುಜ್ಜು ಗುಜ್ಜಾಗಿರುವ ಬೈಕ್   

ಕೋರ (ತುಮಕೂರು): ನೆಲಹಾಳ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ತಡೆಗೋಡೆಗೆ ಬುಧವಾರ ಬೈಕ್ ಡಿಕ್ಕಿ ಹೊಡೆದು ಮೂರು ಮಂದಿ ಸ್ನೇಹಿತರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹಿರಿಯೂರು ತಾಲ್ಲೂಕು ಖಂಡೇನಹಳ್ಳಿಯ ಪೃಥ್ವಿರಾಜ್ (25), ಅಡವಿರಾಮಜೋಗಿಹಳ್ಳಿಯ ಹನುಮಂತರಾಯ (25), ಚಳ್ಳಕೆರೆ ತಾಲ್ಲೂಕಿನ ಚಿಕ್ಕಚೆಲ್ಲೂರು ಗ್ರಾಮದ ಶಿವಕುಮಾರ (25) ಮೃತರು.

ಇವರು ಬೆಂಗಳೂರಿನ ವಿವಿಧ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಆಂಧ್ರಪ್ರದೇಶದ ಅಮರಾಪುರದಲ್ಲಿ ಮಂಗಳವಾರ ಸಂಬಂಧಿಕರ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮರಳಿ ಬೆಂಗಳೂರಿಗೆ ಒಂದೇ ಬೈಕ್‌ನಲ್ಲಿ ಹೊರಟಿದ್ದರು ಎಂದು ಕೋರ ಠಾಣೆ ಸಬ್ ಇನ್‌ಸ್ಪೆಕ್ಟರ್ ಶೇಷಾದ್ರಿ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.