ADVERTISEMENT

ಪತ್ನಿಯ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಪತಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 10:08 IST
Last Updated 4 ಜೂನ್ 2020, 10:08 IST
ದಿವ್ಯಾ
ದಿವ್ಯಾ   

ಗುಬ್ಬಿ: ಪಟ್ಟಣದ ಮಗ್ಗದವರ ಬೀದಿಯ ನಾಗರಾಜು (26) ಪತ್ನಿ ದಿವ್ಯಾ (22) ಶೀಲ ಶಂಕಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ತಾನೇ ಪೊಲೀಸರಿಗೆ ಶರಣಾಗಿದ್ದಾರೆ.

ತಾಲ್ಲೂಕಿನ ಜಿ.ಹೊಸಹಳ್ಳಿ ಗೇಟ್‌ನಲ್ಲಿ ತಾಯಿಯೊಂದಿಗೆ ಫಾಸ್ಟ್‌ಫುಡ್ ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ನಾಗರಾಜು, ವರ್ಷದ ಹಿಂದೆ ನಿಟ್ಟೂರು ಹೋಬಳಿಯ ತಳವಾರನಹಳ್ಳಿಯ ದಿವ್ಯಾ ಅವರನ್ನು ವಿವಾಹವಾಗಿದ್ದರು.

‘ದಿವ್ಯಾಗೆ ಮುಂಚಿತವಾಗೇ ಇನ್ನೊಬ್ಬರೊಂದಿಗೆ ವಿವಾಹವಾಗಿದೆ. ಆ ವಿಷಯ ಮರೆಮಾಚಿ ನನ್ನೊಂದಿಗೆ ಮರು ಮದುವೆ ಮಾಡಿದ್ದಾರೆ ಎಂದು ಅನುಮಾನಿಸಿ ಆರೋಪಿ ಜಗಳ ಮಾಡುತ್ತಿದ್ದನು. ಮನೆಗೆ ಬೇರೆ ವ್ಯಕ್ತಿ ಬಂದು ಹೋಗುತ್ತಾನೆ ಎಂದು ಕಲಹ ಮಾಡುತ್ತಿದ್ದ. ಪತ್ನಿಯ ಚಲನವಲನಗಳ ಮೇಲೆ ನಿಗಾಯಿಡಲು ಮನೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿಕೊಂಡಿದ್ದನು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಜೂನ್‌ 3ರ ಬೆಳಗಿನ ಜಾವ 5ರ ಸುಮಾರಿಗೆ ದಂಪತಿ ನಡುವೆ ಜಗಳ ತಾರಕಕ್ಕೇರಿದೆ. ಆಗ ಪತಿ ಚಾಕುವಿನಿಂದ ಮೂರು ಕಡೆ ಹಲ್ಲೆ ನಡೆಸಿ ಜೀವ ಹೋಗಿರುವುದನ್ನು ಖಚಿತಪಡಿಸಿಕೊಂಡು ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ತಿಳಿಸಿದರು.

ಡಿವೈಎಸ್‍ಪಿ, ಕುಮಾರಪ್ಪ, ತಹಶೀಲ್ದಾರ್ ಪ್ರದೀಪ್ ಕುಮಾರ್, ಸಿಪಿಐ ರಾಮಕೃಷ್ಣಯ್ಯ, ಪಿಎಸ್ಐ ಜ್ಞಾನಮೂರ್ತಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಾಲ್ಕು ದಿನಗಳಲ್ಲಿ ಪಟ್ಟಣದಲ್ಲಿ ಎರಡು ಕೊಲೆ ಪ್ರಕರಣಗಳು ನಡೆದಿದ್ದು, ನಾಗರಿಕರನ್ನು ಬೆಚ್ಚಿಬೀಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.