ADVERTISEMENT

ಶಾಸಕ ಮಸಾಲ ಜಯರಾಮ್ ಪುತ್ರನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 22:21 IST
Last Updated 6 ಏಪ್ರಿಲ್ 2021, 22:21 IST
ಹಲ್ಲೆ ನಡೆದ ಸ್ಥಳದಲ್ಲಿದ್ದ ಕಾರಿನಲ್ಲಿ ಕಂಡುಬಂದ ಕ್ರಿಕೆಟ್‌ ಬ್ಯಾಟ್‌, ಲಾಂಗ್‌
ಹಲ್ಲೆ ನಡೆದ ಸ್ಥಳದಲ್ಲಿದ್ದ ಕಾರಿನಲ್ಲಿ ಕಂಡುಬಂದ ಕ್ರಿಕೆಟ್‌ ಬ್ಯಾಟ್‌, ಲಾಂಗ್‌   

ತುಮಕೂರು: ತುರುವೇಕೆರೆ ಶಾಸಕ ಬಿಜೆಪಿಯ ಮಸಾಲ ಜಯರಾಮ್ ಪುತ್ರ ತೇಜು ಅವರ ಮೇಲೆ ತಾಲ್ಲೂಕಿನ ಹೆಬ್ಬೂರು, ಸಿ.ಎಸ್.ಪುರ ಮಧ್ಯದ ನೆಟ್ಟೆಕೆರೆ ಗೇಟ್ ಸಮೀಪ ಮಂಗಳವಾರ ರಾತ್ರಿ ಹಲ್ಲೆ ನಡೆಸಲಾಗಿದೆ.

ಜಯರಾಮ್ ಸ್ವಗ್ರಾಮ ಗುಬ್ಬಿ ತಾಲ್ಲೂಕಿನ ಅಂಕಳಕೊಪ್ಪ ಗ್ರಾಮಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಕಾರು ಅಡ್ಡಗಟ್ಟಲಾಗಿದೆ. ತೇಜು ಕಾರಿನಿಂದ ಇಳಿಯುತ್ತಿದ್ದಂತೆ ಹಲ್ಲೆ ನಡೆಸಲಾಗಿದೆ. ಈ ಗದ್ದಲ ಗಮನಿಸಿದ ಗ್ರಾಮದ ಜನರು ಸ್ಥಳಕ್ಕೆ ಬರುತ್ತಿದ್ದಂತೆ ಹಲ್ಲೆ ನಡೆಸಿದವರು ಪರಾರಿಯಾಗಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಕಾರು, ಲಾಂಗ್, ಮಚ್ಚು, ಖಾರದಪುಡಿ ವಶಪಡಿಸಿಕೊಂಡಿದ್ದಾರೆ.

ಅಂಕಳಕೊಪ್ಪ ಗ್ರಾಮದ ಊರಿನ ಹಬ್ಬಕ್ಕೆ ಬರುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.