ADVERTISEMENT

ಮದ್ಯದಂಗಡಿಗೆ ಬೆಂಕಿ ಹಚ್ಚಲು ದುಷ್ಕರ್ಮಿಗಳ ಯತ್ನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 2:26 IST
Last Updated 26 ಸೆಪ್ಟೆಂಬರ್ 2020, 2:26 IST
25ಕೆಡಿಜಿ1 ಕೊಡಿಗೇನಹಳ್ಳಿ ಗ್ರಾಮದ ನಂದಿನಿ ವೈನ್ಸ್ ಅಂಗಡಿಗೆ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಅವರು ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದರು.
25ಕೆಡಿಜಿ1 ಕೊಡಿಗೇನಹಳ್ಳಿ ಗ್ರಾಮದ ನಂದಿನಿ ವೈನ್ಸ್ ಅಂಗಡಿಗೆ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಅವರು ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದರು.   

ಕೊಡಿಗೇನಹಳ್ಳಿ: ಹಿಂದೂಪುರ ರಸ್ತೆಯಲ್ಲಿರುವನಂದಿನಿ ವೈನ್‌ ಶಾಪ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಲು ಯತ್ನಿಸಿದ್ದಾರೆ.

ಗುರುವಾರ ರಾತ್ರಿ ಬೈಕ್‌ನಲ್ಲಿ 9 ಗಂಟೆ ಸುಮಾರಿಗೆ ಬಂದ ಮೂವರು ದುಷ್ಕರ್ಮಿಗಳು ಬಿಯರ್ ಬಾಟಲಿಗೆ ಬಟ್ಟೆ ತುರುಕಿ ಬೆಂಕಿ ಹಚ್ಚಿ ಅಂಗಡಿಗೆ ಎಸೆದು ಪರಾರಿಯಾಗಿದ್ದಾರೆ.

ಘಟನೆಯಿಂದ ಅಂಗಡಿಯ ಕೆಲಸಗಾರರಾದ ಗೋಪಾಲ್‌ ಅವರಿಗೆ ಸುಟ್ಟ ಗಾಯಗಳಾಗಿವೆ. ಅವರನ್ನು ಮಧುಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈನ್‌ ಶಾಪ್‌ನ ಏರ್‌ ಕೂಲರ್‌ ಹಾಗೂ ‌ಟೇಬಲ್‌ ಸುಟ್ಟಿದೆ.

ADVERTISEMENT

ಜುಲೈ 27ರಂದು ವೈನ್‌ಷಾಪ್‌ ಮಾಲೀಕ ಆನಂದ್‌ ಅವರಿಗೆ ಪರಪ್ಪನ ಆಗ್ರಹಾರ ಜೈಲಿನದ್ದ ಮಧುಗಿರಿ ಮಲ್ಲೇಶ ಎಂಬುವವನು ತನ್ನ ಸಹಚರರಿಗೆ ಹಣ ಮದ್ಯ ನೀಡುವಂತೆ ಬೆದರಿಕೆ ಹಾಕಿದ್ದ.

ಆ ಬಳಿಕ ಮದ್ಯದಂಗಡಿಯವರು ಮಲ್ಲೇಶನ ಸಹಚರರಿಗೆ ಮದ್ಯ ನೀಡುತ್ತಿದ್ದರು. ಈ ಕೃತ್ಯವೂ ಅವನ ಸಹಚರರಿಂದಲೇ ನಡೆದಿದೆ ಎಂದು ಆರೋಪಿಸಿ ವೈನ್‌ಷಾಪ್‌ನ ಕ್ಯಾಷಿಯರ್‌ ರೇಮಂತ್‌ ದೂರು ನೀಡಿದ್ದಾರೆ.ಕೊಡಿಗೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.