ADVERTISEMENT

ಮರಳು ಸಾಗಣೆ ತಡೆಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 16:30 IST
Last Updated 26 ಸೆಪ್ಟೆಂಬರ್ 2022, 16:30 IST
ಕುಣಿಗಲ್ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಲೋಕಾಯುಕ್ತ ನಿರೀಕ್ಷಕ ಕೆ. ರಾಮರೆಡ್ಡಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು. ತಹಶೀಲ್ದಾರ್ ಮಹಬಲೇಶ್ವರ್ ಹಾಜರಿದ್ದರು
ಕುಣಿಗಲ್ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಲೋಕಾಯುಕ್ತ ನಿರೀಕ್ಷಕ ಕೆ. ರಾಮರೆಡ್ಡಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು. ತಹಶೀಲ್ದಾರ್ ಮಹಬಲೇಶ್ವರ್ ಹಾಜರಿದ್ದರು   

ಮಧುಗಿರಿ: ತಾಲ್ಲೂಕಿನ ಪುರವರ ಗ್ರಾಮದ ಹುಲಿ ಹಳ್ಳದಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಹುಲಿ ಹಳ್ಳಕ್ಕೆ ತೆರಳುವ ರಸ್ತೆಗಳಿಗೆ ವಾಹನಗಳು ಪ್ರವೇಶಿಸದಂತೆ ತಾಲ್ಲೂಕು ಆಡಳಿತದಿಂದ ರಸ್ತೆ ಸುತ್ತಲೂ ಜೆಸಿಬಿ ಯಂತ್ರದ ಮೂಲಕ ಸೋಮವಾರ ಕಾಲುವೆ ತೆಗೆದು ವಾಹನಗಳಿಗೆ ನಿರ್ಬಂಧ ವಿಧಿಸಲಾಯಿತು.

ಇತ್ತೀಚೆಗೆ ಸುರಿದ ಬಾರಿ ಮಳೆಯಿಂದ ಬಿಜವರ ಕೆರೆಯ ಕೋಡಿಯಿಂದ ನೀರು ಹುಲಿ ಹಳ್ಳಕ್ಕೆ ಹರಿದಿತ್ತು. ನೀರಿನ ಜೊತೆಯಲ್ಲಿ ಮರಳು ಕೂಡ ಹರಿದು ಬಂದಿತ್ತು. ಕೆಲವರು ಮರಳನ್ನು ತುಂಬಿಕೊಂಡು ಸ್ಥಳೀಯ ಕಟ್ಟಡ ಹಾಗೂ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು.

ಆದರೆ, ಇದನ್ನೇ ಕೆಲವರು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಮಾರಾಟ ಮಾಡುವ ದಂಧೆ ಮಾಡುತ್ತಿದ್ದಾರೆ ಎಂಬ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಹಳ್ಳಕ್ಕೆ ಕಾಲುವೆಗಳನ್ನು ತೆಗೆದು ವಾಹನಗಳು ಹಳ್ಳಕ್ಕೆ ತೆರಳದಂತೆ ನಿರ್ಬಂಧ ಹೇರಲಾಯಿತು.

ADVERTISEMENT

ಪುರವರ ಕಂದಾಯ ನಿರೀಕ್ಷಕ ಜಿ. ಜಯರಾಮಯ್ಯ , ಕಾರ್ಯದರ್ಶಿ ನಟರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.