ADVERTISEMENT

ಪಾವಗಡ: ವೃದ್ಧನ ಮೇಲೆ ಕರಡಿ ದಾಳಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 8:08 IST
Last Updated 18 ಜನವರಿ 2024, 8:08 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪಾವಗಡ: ತಾಲ್ಲೂಕಿನ ಸಾಸಲಕುಂಟೆ ಬಳಿ ಬುಧವಾರ ವೃದ್ಧರೊಬ್ಬರ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದೆ.

ಆಂಧ್ರಪ್ರದೇಶದ ಕುಂದರ್ಪಿ ಮಂಡಲ ತುಮಕುಂಟೆ ಗ್ರಾಮದ ಈರ ನಾಗಪ್ಪ (60) ದಾಳಿಗೊಳಗಾದವರು.

ADVERTISEMENT

ಸಂಕ್ರಾಂತಿ ಹಬ್ಬಕ್ಕಾಗಿ ಸಂಬಂಧಿ ಮನೆಗೆ ಬಂದಿದ್ದರು. ಗ್ರಾಮದ ಹೊರವಲಯದಲ್ಲಿ ಬಸ್‌ಗೆ ಕಾಯುತ್ತಿದ್ದಾಗ ಕರಡಿ ದಾಳಿ ಮಾಡಿ ತಲೆ, ಮುಖವನ್ನು ಗಾಯಗೊಳಿಸಿದೆ.

ಗ್ರಾಮದ ಬಳಿ ಕರಡಿಯ ಹಾವಳಿ ಹೆಚ್ಚಾಗಿದೆ. ದಿನವಿಡೀ ಕರಡಿಗಳು ಸಂಚರಿಸುತ್ತಿರುತ್ತವೆ. ಇಲಾಖಾ ಅಧಿಕಾರಿಗಳು ಕರಡಿ ಹಿಡಿದು ಬೇರೆಡೆ ಬಿಡಬೇಕು ಎಂದು ರಾಜಣ್ಣ, ವೀರಾಂಜನೇಯ, ನಾಗರಾಜು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.