ತುಮಕೂರು: ಗೋಕುಲ ಬಡಾವಣೆಯ ತನ್ವೀರ್ ಅಹಮ್ಮದ್ ಎಂಬುವವರ ಮನೆಯಲ್ಲಿ ₹5.8 ಲಕ್ಷ ಬೆಲೆಬಾಳುವ ಚಿನ್ನಾಭರಣಗಳು ಕಳ್ಳತನ ಆಗಿವೆ.
ಮೃತಪಟ್ಟ ಸಂಬಂಧಿಕರ ಅಂತಿಮ ದರ್ಶನಕ್ಕಾಗಿ ಅಹಮ್ಮದ್ ನಗರದಲ್ಲಿಯೇ ಇರುವ ಪಿ.ಎಚ್.ಕಾಲೊನಿಗೆ ಮಂಗಳವಾರ ಹೋಗಿದ್ದರು. ಬುಧವಾರ(ಮಾ.11) ಬೆಳಿಗ್ಗೆ ಮನೆಗೆ ಬಂದಾಗ ದುಷ್ಕರ್ಮಿಗಳು ಬಾಗಿಲು ಮುರಿದು, ಕಳ್ಳತನ ಮಾಡಿರುವುದು ಗೊತ್ತಾಗಿದೆ.
ಮನೆಯ ಕಪಾಟಿನಲ್ಲಿ ಇದ್ದ 50 ಗ್ರಾಂ. ತೂಕದ 2 ಎಳೆ ಚಿನ್ನದ ಸರ, 20 ಗ್ರಾಂ. ತೂಕದ ಒಂದು ಎಳೆ ಕರಿಮಣಿ, 30 ಗ್ರಾಂ. ತೂಕದ ಕೆಂಪು ಬಣ್ಣದ ಹರಳಿರುವ ನೆಕ್ಲೆಸ್, 30 ಗ್ರಾಂ. ತೂಕದ ನೆಕ್ಲೆಸ್, 45 ಗ್ರಾಂ. ತೂಕದ 3 ಕೊರಳ ಸರಗಳು, 4 ಗ್ರಾಂ. ತೂಕದ ಬೈತೆಲೆ ಟೀಕಾ, 27 ಗ್ರಾಂ. ತೂಕದ 3 ಚಿನ್ನದ ಉಂಗುರಗಳು, 27 ಗ್ರಾಂ. ತೂಕದ ನಾಲ್ಕು ಜತೆ ಜುಮುಕಿ, 35 ಗ್ರಾಂ ತೂಕದ ಒಂದು ಚಿನ್ನದ ಹಾರ, 10 ಗ್ರಾಂ. ತೂಕದ ಒಂದು ಜತೆ ಓಲೆ, 110 ಗ್ರಾಂ. ಬೆಳ್ಳಿಯ ಕಾಲು ಚೈನು, 8 ಗ್ರಾಂ ತೂಕದ 6 ಬೆಳ್ಳಿಯ ಉಂಗುರಗಳು 10 ಗ್ರಾಂ.ನ ಒಂದು ಬೆಳ್ಳಿಯ ಕೊರಳ ಸರ ನಾಪತ್ತೆಯಾಗಿವೆ.
ಚಿನ್ನದ ಒಡವೆಗಳ ಬೆಲೆ ಸುಮಾರು ₹5.50 ಲಕ್ಷ ಇದ್ದರೆ, ಬೆಳ್ಳಿ ಒಡವೆಗಳ ಮೌಲ್ಯ ₹30,000 ಸಾವಿರ ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜಯನಗರ ಠಾಣೆಯಲ್ಲಿ ಪ್ರಕಟಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.